ಕೃಷಿಕರ ಭವಿಷ್ಯಕ್ಕಾಗಿ ಮತ್ತೊಂದು ಬೆಳಕು ಚಂದೂರದಲ್ಲಿ ಸವಳು ಜವಳು ಕಾಮಗಾರಿಗೆ ಭೂಮಿಪೂಜೆ
Another light for the future of farmers is Bhumi Pooja for Savalu Jawalu work in Chandur
ಕೃಷಿಕರ ಭವಿಷ್ಯಕ್ಕಾಗಿ ಮತ್ತೊಂದು ಬೆಳಕು ಚಂದೂರದಲ್ಲಿ ಸವಳು ಜವಳು ಕಾಮಗಾರಿಗೆ ಭೂಮಿಪೂಜೆ
ಚಿಕ್ಕೋಡಿ 24: ಚಂದೂರ ಗ್ರಾಮದಲ್ಲಿ 1.50 ಕೋಟಿ ರೂಪಾಯಿ ವೆಚ್ಚದ, ಸವಳು ಜವಳು ಕಾಮಗಾರಿಗೆ ಸ್ಥಳೀಯ ಮುಖಂಡರಾದ ಅನಿಲ ಮಾನೆ ಅವರು ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಅನಿಲ ಮಾನೆ ಮಾತನಾಡಿ ಅವರು ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಪ್ರಕಾಶ ಹುಕ್ಕೇರಿ ಹಾಗೂ ಈ ಭಾಗದ ಶಾಸಕರಾದ ಗಣೇಶ ಹುಕ್ಕೇರಿ ಅವರ ಸಂಕಲ್ಪ ಮತ್ತು ಪ್ರಯತ್ನದಿಂದ ಮಾಂಜರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿಯ 370 ಹೆಕ್ಟೇರ್ ಸವಳು ಜವಳು ಜಮೀನು ನಿರ್ಮೂಲನೆಗೆ ಒಟ್ಟು 4 ಕೋಟಿ 62 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಅದರಲ್ಲಿ ಇಂದು ನಮ್ಮ ಚಂದೂರ ಗ್ರಾಮದಲ್ಲಿ 1.50 ಕೋಟಿ ರೂಪಾಯಿ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಈ ಮಹತ್ವದ ಯೋಜನೆಯು ರೈತರ ಬದುಕಿನಲ್ಲಿ ಹೊಸ ದಾರಿಗಳನ್ನು ತೆರೆದಿಡಲಿದೆ, ರೈತರ ಸಮೃದ್ಧಿಗಾಗಿ ನಮ್ಮ ಶಾಸಕರ ನೇತೃತ್ವದಲ್ಲಿ ಅಭಿವೃದ್ಧಿಯ ಹಸಿರು ಕ್ರಾಂತಿ ಮುಂದುವರಿಯಲಿದೆ ಎಂದು ಹೇಳಿದರು. ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯರಾದ ಮಾರುತಿ ಕಾಂಬಳೆ ಮಾತನಾಡಿ ಈ ಯೋಜನೆಯ ಮೂಲಕ 120 ಹೆಕ್ಟೇರ್ ಕೃಷಿ ಜಮೀನು ಫಲವತ್ತಾಗಿ, ರೈತರು ಉತ್ತಮ ಬೆಳೆ ಬೆಳೆಸಲು ಸಾಧ್ಯವಾಗುತ್ತದೆ. 361 ರೈತರು ನೇರ ಲಾಭ ಪಡೆಯಲಿದ್ದು, ಅವರ ಆರ್ಥಿಕ ಭದ್ರತೆ ಮತ್ತಷ್ಟು ಬಲಪಡಲಿದೆ. ಉತ್ತಮ ಬೆಳೆ ಉತ್ಪಾದನೆಯೊಂದಿಗೆ ರೈತರ ಆದಾಯ ಹೆಚ್ಚುವ ಸಾಧ್ಯತೆ ಇದ್ದು, ಇದು ಕೃಷಿ ಚೇತರಿಕೆಗೆ ಪ್ರಮುಖ ಹೆಜ್ಜೆಯಾಗಲಿದೆ ಎಂದು ಹೇಳಿ ಪ್ರಕಾಶ ಹುಕ್ಕೇರಿ ಹಾಗೂ ಗಣೇಶ ಹುಕ್ಕೇರಿ ಅವರಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದ ಹೇಳಿದರು.ಅನಿಲ ಪಾಟೀಲ, ಶರದ ಪಾಟೀಲ, ಶಶಿಕಾಂತ ಪಾಟೀಲ, ಚಂದ್ರಕಾಂತ ಪಾಟೀಲ, ಅಶೋಕ ಜಮದಾಡೇ, ಸಿದ್ದು ಮಗದುಮ್ಮ, ವಿಷ್ಣು ಪಾಟೀಲ, ಮಾರುತಿ ಕಾಂಬಳೆ, ಪಾಪಾ ಮದ್ಯಾಪ್ಗೊಳ, ಸಂತೋಷ್ ಕುಂಬಾರ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 