ಪ್ರತಿಷ್ಠಾನದ ಸನ್ಮಾನ ಪಡೆದ ಆಣ್ಣಾಜಿ ಪಡತಾರೆ
ಲೋಕದರ್ಶನ ವರದಿ
ಮುಧೋಳ: ದಿ. ಜಿ.ಆರ್.ಕಾಳಗಿ ಅವರು ಆದರ್ಶ ಶಿಕ್ಷಕರಾಗಿ ಲಕ್ಷಾಂತರ ವಿದ್ಯಾಥರ್ಿಗಳ ಜ್ಞಾನದಾಹ ತಿರಿಸಿ ಜನ ಮೆಚ್ಚಿಗೆಯ ಶಿಕ್ಷರಾಗಿದ್ದರೆಂದು ದಾನಮ್ಮದೇವಿ ಮಹಿಳಾ ಕಾಲೇಜಿನ ನಿ. ಪ್ರಾಚಾರ್ಯ ಡಾ.ಎನ್.ಎಂ ತೋಟದ ಹೇಳಿದರು.
ಅವರು ನಗರದ ಟಂಕಸಾಲಿ ಭವನದಲ್ಲಿ ನಡೆದ ಕಾಳಗಿ ಸ್ಮರಣೋತ್ಸವದಲ್ಲಿ ಉಪನ್ಯಾಸಕರಾಗಿ ಮಾತನಾಡಿ, ತಮ್ಮ ಕೊನೆಯುಸಿರು ಇರುವರೆಗೊ ಕಾಳಗಿ ಅವರು ಅತ್ಯಂತ ಪ್ರಾಮಾಣಿಕವಾಗಿ ಶಿಕ್ಷಣ ರಂಗದಲ್ಲಿ ಅಪಾರ ಸೇವೆ ಸಲ್ಲಿಸಿದರೆಂದು ತೋಟದ ಅವರು ಅಭಿಮಾನದಿಂದ ಹೇಳಿದರು.
ಇದೇ ವೇಳೆ ಮಕ್ಕಳ ಸಾಹಿತಿ ಅಣ್ಣಾಜಿ ಪಡತಾರೆ ಅವರನ್ನು ಕಾಳಗಿ ಪ್ರತಿಷ್ಠಾನದಡಿ ಸನ್ಮಾನಿಸಲಾಯಿತು. ಸನ್ಮಾನೋತ್ತರವಾಗಿ ಪಡತಾರೆ ಅವರು ಮಾತನಾಡಿ,ಕಾಳಗಿ ಅವರು ನನಗೂ ಕೂಡಾ ಗುರುಗಳಾಗಿದ್ದರೆಂದು ಹೇಳಿ, ಅವರೊಬ್ಬ ಶಿಕ್ಷಣ ಪ್ರೇಮಿ ಆಗಿದ್ದರೆಂದು ಹೇಳಿದರು.
ಸಾನಿದ್ಯವನ್ನು ವಹಿಸಿದ್ದ ಕಸಬಾ ಜಂಬಗಿಯ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಕಾಳಗಿ ಅವರು ಸಲ್ಲಿಸಿದ ಗಣನೀಯ ಸೇವೆಂನ್ನು ಬಣ್ಣಿಸಿದರು. ಅಧ್ಯಕ್ಷತೆಯನ್ನು ಗಾಂಧಿವಾದಿ ತಮ್ಮಣ್ಣಪ್ಪ ಬುದ್ನಿ ವಹಿಸಿ, ಕಾಳಗಿ ಶಿಕ್ಷಕರು ಈಗಿನ ಶಿಕ್ಷಕರಿಗೆ ಅನುಕರಣಿಯರಾಗಿದ್ದರೆಂದರು.
ಪ್ರತಿಷ್ಠಾನದ ಅಧ್ಯಕ್ಷ ಬಿ.ಎಸ್, ರಾಮತೀರ್ಥ ಸ್ವಾಗತಿಸಿದರು. ಪ್ರ.ಕಾ. ಡಾ.ಸಂಗಮೇಶ ಕಲ್ಯಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟಿ.ಕೆ ಹಂಚಾಟೆ ನಿರೂಪಿಸಿ ದರು. ರುದ್ರಪ್ಪ ಜಾಡರ ವಂದಿಸಿದರು. ಕಾಳಗಿ ಕುಟುಂಬದವರು, ಶಿಷ್ಯ ವರ್ಗ ಹಾಗೂ ಅಭಿಮಾನಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 