ಅಂಬೇಡ್ಕರ್ ಪೌಂಡೇಷನ್ ಹಾಗೂ ದಲಿತ ವಿದ್ಯಾರ್ಥಿ ಪರಿಷತ್ ಸಹಯೋಗದಲ್ಲಿ ಸಹಾಯ ಕೈಪಿಡಿ ಬಿಡುಗಡೆ ಮಾಡಿ ವಿದ್ಯಾರ್ಥಿಗಳಿಗೆ ನೀಡಲಾಯಿತು
ವಿಜಯಪುರ, 12 : ತಾಳಿಕೋಟಿ ತಾಲೂಕಿನ ಆಲಗೂರ್ ಗ್ರಾಮದ ಸರಕಾರಿ ಪ್ರೌಢ ಶಾಲೆ ಯಲ್ಲಿ ಅಂಬೇಡ್ಕರ್ ಪೌಂಡೇಷನ್ ಹಾಗೂ ದಲಿತ ವಿದ್ಯಾರ್ಥಿ ಪರಿಷತ್ ಸಹಯೋಗದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬರ ಅಂಬೇಡ್ಕರ್ ರವರ 134 ನೇ ಜನ್ಮ ಜಯಂತಿ ನಿಮಿತ್ಯ ಕೊಡುಗೆಯಾಗಿ ನಾಡಿನ ಖಖಐಅ ಓದುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಪರಿಷತ್ತಿನ ಹಿತೈಸಿ ಶಿಕ್ಷಕಶಕರುಂದ ಸಿದ್ದಗೋಳಿಸಿರುವ ಖಖಐಅ ಪರೀಕ್ಷಾ ಸಹಾಯಕ ಕೈಪಿಡಿ ಬಿಡುಗಡೆಗೊಳಿಸಿ ಒಂದುದಿನದ ಕಾರ್ಯಾಗಾರ ಏರಿ್ಡಸಲಾಯಿತು. ಈ ಕಾರ್ಯಕ್ರಮದ ರೂವಾರಿಯಾದ ಸಂತೋಷ್ ಪೂಜಾರಿರವರು ಮಾತನಾಡಿ ವಿದ್ಯಾರ್ಥಿಗಳು ನಮ್ಮ ಗುರಿಯನ್ನ ಸಾಧಿಸಬೇಕಾದರೆ ಛಲ ಬಿಡದೆ ಓದಬೇಕು, ತಳ ಸಮುದಾಯದ ವಿದ್ಯಾರ್ಥಿಗಳು ಈ ದೇಶದಲ್ಲಿ ಕಷ್ಟ ಪಟ್ಟಾಗ ಮಾತ್ರ ಫಲ ಸಿಗಲು ಸಾಧ್ಯ, ಶ್ರಮದಿಂದ ಸಾಧನೆ ಮಾಡಲು ನೀವು ಮುಂದೆ ಬರಬೇಕೆಂದು ಹೇಳಿದರು. ವಿದ್ಯಾರ್ಥಿ ಪರಷತ್ನ ಮುಖಂಡರಾದ ಅಕ್ಷಯ್ ಕುಮಾರ್ ಅಜಮನಿ ಯವರು ಮಾತನಾಡಿ ವಿದ್ಯಾರ್ಥಿಗಳು ಶೋಷಿತ ಸಮುದಾಯದ ವಿದ್ಯಾರ್ಥಿಗಳು ದೇಶದ ಭವಿಷ್ಯತ್ತಿನ ಬೆಳಗಿಸುವ ಕೆಲಸ ನಿಮ್ಮಿಂದ ಆಗಬೇಕಾಗುತ್ತದೆ ಆದ್ದರಿಂದ ಪರೀಕ್ಷೆ ಬರೆಯಲು ತಾವು ಸತ ಪ್ರಯತ್ನ ದಿಂದ ತಯಾರಿ ಮಾಡಿ ಕೊಳ್ಳಿ ಎಂದೂ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಈ ಒಂದು ಕೈಪಿಡಿಯಲ್ಲಿರುವ ವಿಷಯಗಳನ್ನು ಸಂಪೂರ್ಣವಾಗಿ ಓದಿದರೆ ನೂರಕ್ಕೆ ನೂರು ಅಂಕ ಪಡಿಯುಹುದರಲ್ಲಿ ಯಾಹುದೆ ಸಂದೇಹವಿಲ್ಲ ಈ ಕಾರ್ಯಮಾಡಿದ ದಲಿತ ವಿದ್ಯಾರ್ಥಿ ಪರಿಷತ್ ತಂಡದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು ಈ ಕಾರ್ಯಕ್ರಮದ ವೇದಿಕೆ ಅಲಂಕರಿಸಿದ ವಸತಿ ನಿಲಯ ಪಾಲಕರದ ಆರ್,ಎಂ ಬಿರಾದಾರ್ ರವರು ವಿದ್ಯಾರ್ಥಿಗಳಿಗೆ ಉತ್ತಮವಾಗಿ ಪರೀಕ್ಷೆಯನ್ನು ಎದುರಿಸಿ ಎಂದು ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕರು ವಿದ್ಯಾರ್ಥಿ ಪರಿಷತ್ ಮುಖಂಡರಾದ, ಕಾಶೀನಾಥ್ ಬೇಕಿನಾಳ, ಅರುಣ ಪೂಜಾರಿ,ಅಂಬರೇಶ್ ದುರುಗಮುರಗ, ಶಂಕರ ಬಸರಗಿ, ಯುವರಾಜ್ ಓಲೇಕಾರ್, ಪಂಡಿತ ಯಲಗೋಡ ಮತ್ತು ಗ್ರಾಮದ ಯುವಕರಾದರ ರವೀಂದ್ರ ಹೊಕ್ರಾಣಿ, ರವಿಕುಮಾಸರ್ ಸಿಗರಿ, ಭಾಗಿಯಾಗಿದ್ದರು.