ವಿದ್ಯಾರ್ಥಿ ಗಳು ಪಡೆದ ಜ್ಞಾನ ಸದುಪಯೋಗಿಸಿಕೊಳ್ಳಲಿ: ಬೆಟಗಾರ
ಗೋಕಾಕ 13: ತಾವು ಪಡೆದ ಜ್ಞಾನದ ಸದುಪಯೋಗದಿಂದ ವಿದ್ಯಾಥರ್ಿಗಳು ತಮ್ಮ ಬದುಕನ್ನು ಸುಂದರಗೊಳಿಸಿಕೊಳ್ಳುವಂತೆ ಇಲ್ಲಿಯ ಲಕ್ಷೀ ಏಜುಕೇಶನ್ ಟ್ರಸ್ಟಿನ್ ಆಡಳಿತಾಧಿಕಾರಿ ಎಸ್.ಜಿ.ಬೆಟಗಾರ ಹೇಳಿದರು.
ಶನಿವಾರದಂದು ನಗರದ ಲಕ್ಷ್ಮಣರಾವ ಜಾರಕಿಹೊಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿ ಗಳ ಬೀಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳಿಗೆ ಜ್ಞಾನದ ಜ್ಯೋತಿಯನ್ನು ನೀಡಿ ಗುರುಗಳು ಜೀವನದ ಮಾರ್ಗವನ್ನು ನೀಡಿದ್ದಾರೆ. ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಶಿಲ್ಪಿಗಳು ತಾವೇ ಆಗಿದ್ದು, ಇಂದಿನ ಸ್ಪಧರ್ಾತ್ಮಕಯುಗದಲ್ಲಿ ತಾವು ಕಲಿತ ಕೌಶಲ್ಯಗಳ ಸದುಪಯೋಗದಿಂದ ತಮ್ಮ ಮುಂದಿನ ಜೀವನವನ್ನು ಉಜ್ವಲಗೊಳಿಸಿಕೊಳ್ಳಿರೆಂದು ಹಾರೈಸಿದರು.
ವೇದಿಕೆ ಮೇಲೆ ಪ್ರಚಾರ್ಯ ಎನ್.ಎಮ್.ತೋಟಗಿ, ಉಪನ್ಯಾಸಕರುಗಳಾದ ಆಯ್.ಎಸ್.ಪವಾರ, ಎಸ್.ಎಸ್.ನಾಯ್ಕರ, ಎಮ್.ವಾಯ್.ಪಾಟೀಲ, ಡಿ.ಬಿ.ತಳವಾರ, ವಿದ್ಯಾಥರ್ಿ ಪ್ರತಿನಿಧಿ ತೇಜಸ್ವಿನಿ ಬಡಿಗೇರ ಇದ್ದರು.
ವಿದ್ಯಾರ್ಥಿಗಳಾದ ಐಶ್ವರ್ಯ ಹಾಗೂ ರಾಜಶ್ರೀ ಸ್ವಾಗತಿಸಿದರು, ಮೇಘಾ ಮತ್ತು ಪೂಣರ್ಿಮಾ ನಿರೂಪಿಸಿದರು, ಕೆಂಪಣ್ಣ ಕುಡ್ಡೆಮ್ಮಿ ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 