ಕನ್ನಡ ನಿಬಂಧ ಸ್ಪಧರ್ಾ ಕಾರ್ಯಕ್ರಮದಲ್ಲಿ ಅರವಿಂದ ಹುನಗುಂದ ಅಭಿಮತ ಮಾತೃಭಾಷೆ ಅಭಿಮಾನ, ಅನ್ಯಭಾಷೆ ಗೌರವವಿರಲಿ
ಲೋಕದರ್ಶನ ವರದಿ
ಬೆಳಗಾವಿ 20-ಮಾತೃ ಭಾಷೆ ಕನ್ನಡ ಕುರಿತು ಅಸಡ್ಡೆ ಬೇಡ. ಕನ್ನಡ ಭಾಷೆಯಲ್ಲಿ ಕಲಿತ ಸರ್. ಎಂ. ವಿಶ್ವೇಶ್ವರಯ್ಯ, ವಿಜ್ಞಾನಿ ಸಿ.ಎನ್.ರಾವ್, ವೈದ್ಯರಾದ ಎಂ. ಸಿ. ಮೋದಿ ಹೀಗೆ ಹಲವಾರು ಮಹಿನಿಯರು ವಿಶ್ವವಿಖ್ಯಾತರಾದ ಉದಾಹರಣೆಗಳಿವೆ. ಮತೃ ಭಾಷೆಯ ಅಭಿಮಾನವಿರಲಿ ಅದರಂತೆ ಬೇರೆ ಬಾಷೆಗಳನ್ನೂ ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿವೃತ್ತ ಅಧಿಕಾರಿಗಳಾದ ಅರವಿಂದ ಹುನಗುಂದ ಮಕ್ಕಳನ್ನುದ್ದೇಶಿ ಮಾತನಾಡುತ್ತ ಮಕ್ಕಳಿಗೆ ತಿಳಿಸಿ ಹೇಳಿದರು.
ನಗರದ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದವರು ಖಾನಪೂರದ ಸ್ವಾಮಿ ವಿವೇಕಾನಂದ ಇಂಗ್ಲೀಷ ಮಾಧ್ಯಮ ಶಾಲೆಯಲ್ಲಿ "ಮಕ್ಕಳಿಗಾಗಿ ಕನ್ನಡ ನಿಬಂಧ ಸ್ಪಧರ್ೆ ಯನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅರವಿಂದ ಹುನಗುಂದ ಮೇಲಿನಂತೆ ಅಭಿಪ್ರಾಯ
ಪಟ್ಟರು.
ಬಾಷಾ ಬೇಧದವೆಂಬುದ ಬೇಡ. ಮರಾಠಿ ಭಾಷೆಯಲ್ಲಿರುವ ಅಕ್ಕ, ಅಣ್ಣಾ ಮುಂತಾದ ಶಬ್ಧಗಳು ಕನ್ನಡ ಭಾಷೆಯಿಂದ ಬಂದವುಗಳು. ಹೀಗೆ ಭಾಷೆ ಭಾಷೆಗಳ ಮಧ್ಯ ಸಾಮರಸ್ಯ ಬೆಳೆಸುವ ಕಾರ್ಯ ನಾವಿಂದು ಮಾಡೋಣವೆಂದು ಅವರು
ಹೇಳಿದರು.
ವಿ.ಎಮ್. ಬನೋಳಿ ಅಧ್ಯಕ್ಷತೆ ವಹಿಸಿದ್ದರು. ಸ್ವಾಮಿ ವಿವೇಕಾನಂದ ಇಂಗ್ಲೀಷ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಘಾಟಗೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ನಿರಜಾ ಗಣಾಚಾರಿ ಹಾಗೂ ಅನಂತ ಗೋಣಬಾಳ ಉಪಸ್ಥಿತರಿದ್ದರು.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 