‘ಕೃಷಿಯೋಗಿ' ಚಲನಚಿತ್ರದ ಪೋಸ್ಟರ್ ಬಿಡುಗಡೆ

ಬೆಂಗಳೂರ 30: ದೇವಾಂಗ ಸವಿತ ಉದಯೀಶ ಪ್ರೊಡಕ್ಷನ್ಸ್‌ ಅವರ 'ಕೃಷಿಯೋಗಿ' ಕನ್ನಡ ಚಲನಚಿತ್ರದ ಪೋಸ್ಟರನ್ನು ಬಿಗ್ ಬಾಸ್ ಖ್ಯಾತಿಯ ಜೆಕೆ ಬಿಡುಗಡೆ  ಮಾಡಿದರು.  

ಮಂಡ್ಯ, ತುಮಕೂರು, ಮೈಸೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದ್ದು  ರೈತರ ಜೀವನ ಹಿನ್ನಲೆಯಲಿ ಚಿತ್ರದ ಕಥೆ ಇದೆ .ಎಂದು ನಿರ್ದೇಶಕ ಯಶವಂತಕುಮಾರ, ನಿರ್ಮಾಪಕಿ ಸವಿತ ತಿಳಿಸಿದರು. ಈ ಚಿತ್ರದ ಛಾಯಾಗ್ರಹಣ ಮಾದೇಶ ಟಿ ಹಳ್ಳಿ, ಕಥೆ, ಚಿತ್ರಕಥೆ, ಸಂಭಾಷಣೆ ಕುಮಾರ ಸಾರ್ವಭೌಮ,  ಸಂಗೀತ ಸತ್ಯವೇದಸ್ವಿ,  ಸಾಹಸ ಅಶೋಕ್, ಗಣೇಶ್  ಕಲೆ ದಿನೇಶ್,  ಸಂಕಲನ ಸುನಿ ಎಸ್ ಜೈನ್,  ನೃತ್ಯ ಹುಸೇನ್,  ವಿನ್ಯಾಸ ಲೋಕೇಶ್,     ಪಿಆರ್‌ಓ.ಡಾ.ಪ್ರಭು ಗಂಜಿಹಾಳ,ಡಾ.ವೀರೇಶ ಹಂಡಿಗಿ ,ಹೊರಾಂಗಣ ಘಟಕ ರಾಯಲ್ ಸಿನಿ ಕ್ರಿಯೇಷನ್,   ,ಸಹ ನಿರ್ದೇಶನ ಮಧು ಜಿ, ಸೂರ್ಯ ,ಜಾಕಿ ವೀರೇಶ್ ಕಾರ್ಯ ನಿರ್ವಹಣೆ ರವಿ,    ನಿರ್ದೇಶನ ಯಶವಂತಕುಮಾರ್ ,ಕಾರ್ಯಕಾರಿ ನಿರ್ಮಾಪಕರು ವಿಶ್ವನಾಥ್ , ನಿರ್ಮಾಪಕರು ಸವಿತ ಉದಯ್ ಕುಮಾರ್ ಆಗಿದ್ದಾರೆ.