ಮಹಾಲಿಂಗಪೂರ : ಪ್ಲಾಸ್ಟಿಕ್ ಬಳಕೆ ನಿಷೇಧ ಪುರಸಭೆ ಸಿಬ್ಬಂದಿಯಿಂದ ದಾಳಿ
ಲೋಕದರ್ಶನ ವರದಿ
ಮಹಾಲಿಂಗಪೂರ 22: ಜೋಡು ರಸ್ತೆಯಲ್ಲಿ ಬರುವ ಹಲವಾರು ಅಂಗಡಿ ಮುಂಗಟ್ಟುಗಳ ಮೇಲೆ ಪುರಸಭೆಯ ಅಧಿಕಾರಿಗಳು ದಾಳಿ ಮಾಡಿ 50ಕಿಲೋ ಪ್ಲಾಸ್ಟಿಕ್ ವಶಪಡಿಕ್ಕೊಂಡು ಎರಡನೆ ಸಾರಿ ಸಿಕ್ಕರೆ ದಂಡದ ಜೊತೆಗೆ ಕಾನೂನಿನ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.
ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅನೇಕ ಸಂಶೋಧನೆಗಳು ಒತ್ತಿ ಹೇಳಿವೆ. ಬಿಪಿಎ ಹಾಗೂ ಬಿಸ್ಪಿನಾಲ್ ಎ ಎಂಬ ಹಾನಿಕಾರಕ ರಾಸಾಯನಿಕವು ದೇಹವನ್ನು ಸೇರುವುದರಿಂದ ಕ್ಯಾನ್ಸರ್ ನಂಥ ಮಾರಕ ಕಾಯಿಲೆ ಬರುತ್ತದೆ.
ಮನೆ ಗೊಬ್ಬರದಲ್ಲಿ ಹಾಗೂ ಸಾರ್ವಜನಿಕ ಕಸದ ತ್ಯಾಜ್ಯದಲ್ಲಿ ಹೆಚ್ಚಿನ ಪ್ರಮಾಣ ಪ್ಲಾಸ್ಟಿಕ್ ಇರುತ್ತದೆ.ಇದನ್ನು ಭೂಮಿಗೆ ಹಾಕುವದರಿಂದ ಹಾಗೂ ಸುಡುವುದರಿಂದ ರಾಸಾಯನಿಕ ಮಣ್ಣಿನ ಜ್ಯೊತೆ ಸೇರಿ ಇಳುವರಿ ಕಡಿಮೆ ಬರುವುದಲ್ಲದೆ ವಾತಾವರಣವು ಕಲುಷಿತಗೊಂಡು ಅಸ್ತಮಾ, ಕ್ಯಾನ್ಸರ್ ರೋಗಗಳಿಗೆ ಕಾರಣವಾಗುತ್ತದೆ.ಇದು ಸರಕಾರದ ವರದಿಯಲ್ಲಿ ದ್ರಢಪಟ್ಟಿದೆ.
ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಭಾರತ ಸರಕಾರ ಕೆಲ ವರ್ಷಗಳ ಹಿಂದೆ ಕೆಲ ಮಾನದ ಪ್ಲಾಸ್ಟಿಕ್ ವಸ್ತುಗಳನ್ನು, ಕ್ಯಾರಿಬ್ಯಾಗ್ ಗಳನ್ನು ಬ್ಯಾನ್ ಮಾಡಿದೆ.
ಇದರ ಆಧಾರದ ಮೇಲೆ ಪುರಸಭೆ ಮುಖ್ಯಾಧಿಕಾರಿ ಆದೇಶದ ಮೆರೆಗೆ ಕಿರಿಯ ಆರೋಗ್ಯ ನಿರಿಕ್ಷಕರಾದ ರಾಜು ಹೂಗಾರ್, ಇಫರ್ಾನ್ ಝಾರೆ, ಪುರಸಭೆ ಸಿಬ್ಬಂದಿ ಪರಶುರಾಮ ಉತ್ತೂರ್, ದುರ್ಗಪ್ಪ ಜಮಖಂಡಿ, ಹಾಗೂ ಇನ್ನಿತರರು ಈ ಕಾಯರ್ಾಚರಣೆ ಯಲ್ಲಿ ಭಾಗಿಯಾಗಿ ಪ್ಲಾಸ್ಟಿಕ್ ವಶಪಡಿಸಿಕೊಂಡರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 