ಅಡಿವೆಪ್ಪ ಗವನ್ನವರಗೆ ಯುವ ಸಾಮಾಜಿಕ ಕಾರ್ಯಕರ್ತ ಪ್ರಶಸ್ತಿ

ಪಣಜಿ 04: ಧ್ಯಾನರಚನ ಸಾಮಾಜಿಕ ಸಂಸ್ಥೆಯ ವತಿಯಿಂದ ಬೆಳಗಾವಿ ತಾಲ್ಲೂಕಿನ ವಾಗವಾಡೆ ಗ್ರಾಮದ ಅಡಿವೆಪ್ಪ ಗವನ್ನವರ ಅವರಿಗೆ ಮಹಾತ್ಮಾ ಗಾಂಧಿ ಮಾನವ ಸೇವಾ ರಾಷ್ಟ್ರೀಯ ಪ್ರಶಸ್ತಿ -2024ರ ಯುವ ಸಾಮಾಜಿಕ ಕಾರ್ಯಕರ್ತ ಪ್ರಶಸ್ತಿಗೆ ಲಭಿಸಿದೆ.ಗೋವಾ ಪಣಜಿಯ ಕಲಾ ಅಕಾಡೆಮಿಯಲ್ಲಿ ಬುಧವಾರ ನಡೆದ ಮಹಾತ್ಮಾ ಗಾಂಧಿ ಮಾನವ ಸೇವಾ ರಾಷ್ಟ್ರೀಯ ಪ್ರಶಸ್ತಿ -2024ರ ಕಾರ್ಯಕ್ರಮದಲ್ಲಿ ಯುವ ಸಾಮಾಜಿಕ ಕಾರ್ಯಕರ್ತ ಹಾಗೂ ಕಿರು ಚಿತ್ರ ನಿರ್ಮಾಣದ ವಿಭಾಗದ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದಗೋವಾ ವಿಧಾನಸಭೆಯ ಸಭಾಪತಿಗಳಾದ ರಮೇಶ್ ತಾವಾಡಕರ ಅವರು ಪ್ರಶಸ್ತಿ ಪ್ರದಾನ ಮಾಡಿದರು.ಇತ್ತೀಚಿಗೆ ಕಿಚ್ಚ ಸುದೀಪ ಹುಟ್ಟುಹಬ್ಬದ ಪ್ರಯುಕ್ತ ವಾಗವಾಡೆ (ಮಾರ್ಕಾಂಡೇಯ ನಗರ) ಗ್ರಾಮದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಬೋರವೆಲ್ ಕೊರೆಸುವ ಮೂಲಕ ಅಡಿವೆಪ್ಪ ಗವನ್ನವರ ಸುದ್ದಿಯಾಗಿದ್ದರು. ಸದರಿ ಪ್ರಶಸ್ತಿ ಲಭಿಸಿರುವುದು ಹಿರಿಯ ಸಾಮಾಜಿಕ ಕಾರ್ಯಕರ್ತರು, ಕನ್ನಡಪರ ಸಂಘಟನೆಗಳು, ವಾಗವಾಡೆ ಗ್ರಾಮದ ಜನರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.