ಮಕ್ಕಳನ್ನು ನಸುಕಿನಲ್ಲಿ ಎಬ್ಬಿಸಿ ಓದಿಸಿ: ಡಾ.ಎ.ಬಿ.ಇರಾಜ
Wake up children at dawn and read: Dr. A.B. Iraja
ತಾಳಿಕೋಟೆ 04: ಪೂರ್ವ ಸಿದ್ಧತಾ ಪರೀಕ್ಷೆ ಸರಣಿ ಸೋಮವಾರದಂದು ಆರಂಭಗೊಳ್ಳಲಿದೆ, ಮಕ್ಕಳನ್ನು ನಸುಕಿನಲ್ಲಿ ಎಬ್ಬಿಸಿ ಓದಿಸಿ. ಈಗಾಗಲೇ ಪಾಠ ಬೋಧನೆ ಮುಗಿದಿದ್ದು ಮತ್ತೊಮ್ಮ ತಿಳಿಯದೆ ಉಳಿದ ಪಾಠಗಳನ್ನು ಮತ್ತೊಮ್ಮ ಬೊಧಿಸಲಾಗುತ್ತಿದೆ ಹೀಗಾಗಿ ಮಕ್ಕಳನ್ನು ಶಾಲೆ ಬಿಡಿಸಿ ಮದುವೆ ಜಾತ್ರೆಗೆಂದು ಕರೆದೊಯ್ಯಬೇಡಿ ಎಂದು ಮುಖ್ಯೋಪಾಧ್ಯಾಯ ಡಾ.ಅನಿಲಕುಮಾರ ಇರಾಜ ಪಾಲಕರಿಗೆ ತಿಳಿ ಹೇಳಿದರು.
ಅವರು ಪಟ್ಟಣದ ಎಸ್.ಕೆ.ಬಾಲಕಿಯರ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಪಾಲಕರ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಈ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಹತ್ತನೆ ವರ್ಗದ ಗುರುಮಾತೆ ಪಿ.ಬಿ ದೇಶಮುಖ ಮಾತನಾಡುತ್ತಾ ಪಾಲಕರು ಶಿಕ್ಷಕರು ಕೂಡಿ ಮಕ್ಕಳ ಅಭ್ಯಾಸದ ಕಡೆಗೆ ಗಮನವನ್ನು ಹರಿಸಬೇಕು. ಆದರೆ ಪಾಲಕರ ಸಭೆಗೆ ಹಾಜರಾಗದೆ ತಾತ್ಸಾರ ಭಾವನೆ ತೋರುವ ಪಾಲಕರಿಗೆ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ಶಿಕ್ಷಕ ಎಮ್.ಎಮ್.ಕಾಂಬಳೆ ನಿರೂಪಿಸಿದರು. ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 