ಯೋಗ ಕ್ಷೇತ್ರದ ಹಿರಿಯರಿಗೆ ಆತ್ಮೀಯ ಗೌರವ ಸನ್ಮಾನ

ಯೋಗ ಕ್ಷೇತ್ರದ ಹಿರಿಯರಿಗೆ ಆತ್ಮೀಯ ಗೌರವ ಸನ್ಮಾನ A heartfelt felicitation for veterans in the field of Yoga

ಲೋಕದರ್ಶನ ವರದಿ 

 ಹುಬ್ಬಳ್ಳಿ   23: ವಿಶ್ವ ಯೋಗ ದಿನ ಅಂಗವಾಗಿ ಹಲವಾರು ವರ್ಷಗಳಿಂದ ಯೋಗವನ್ನು ಕಲಿಸುತ್ತಿರುವ,  ಹಿರಿಯರು , ಮಾರ್ಗದರ್ಶಕರು, ಹಿತೈಷಿಗಳು,  ಯೋಗ ಗುರು ಡಾ. ಈಶ್ವರ ಮೆಣಸಿನಕಾಯಿ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ  ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಶಾಲು, ಗ್ರಂಥ ನೀಡಿ, ಮಾಲಾರೆ​‍್ಣ ಮಾಡಿ ಹೃದಯ ಸ್ಪರ್ಶಿಯಾಗಿ, ಅತ್ಯಂತ ಗೌರವದಿಂದ ಸನ್ಮಾನಿಸಲಾಯಿತು. ಅಭಿನಂದನೆಗಳನ್ನು ಸಲ್ಲಿಸಿ, ಶುಭ ಕೋರಿದರು. ಹಿರಿಯರಾದ ಆರ್ ಜಿ.ಹೊಸೂರ,   ಇಂಗ್ಲೀಷ್ ಪ್ರಾಧ್ಯಾಪಕ  ವೀರೇಶ ಚಂದ್ರಕಾಂತ ಬಳಿಗಾರ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ   ಕಾರ್ಯದರ್ಶಿ,    ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಸಚಿನ್,  ಮುಂತಾದವರು ಇದ್ದರು.