ವಿಶ್ವಕರ್ಮ ಜಯಂತಿ ಉತ್ಸವ ಆಚರಣೆ
Vishwakarma Jayanti festival celebration: Yamakanamaradi
ಯಮಕನಮರಡಿ 17: ವಿಶ್ವದ ಮನುಕುಲಕ್ಕೆ ಭಕ್ತಿ ಮಾರ್ಗ ತೋರಿಸುವಲ್ಲಿ ಯಶಸ್ವಿಯಾದ ವಿಶ್ವಕರ್ಮ ಸಮುದಾಯ ಜಗತ್ತಿನಾದ್ಯಂತ ವಿವಿಧ ಪ್ರಕಾರದ ಮೂರ್ತಿಗಳನ್ನು ಕೆತ್ತಿ ಅವುಗಳಿಗೆ ನಿಜರೂಪ ರೂಪಿಸಿ ವಿಶಕರ್ಮ ಸಮುದಾಯಕ್ಕೆ ಭಕ್ತಿ ಮಾರ್ಗ ತೋರಿಸಿದ ವಿಶ್ವಕರ್ಮ ಸಮುದಾಯದ ಶ್ರೇಷ್ಠ ಗುರುಗಳ ಜಯಂತಿ ಉತ್ಸವವನ್ನು ನಾವೆಲ್ಲರೂ ಆಚರಿಸಬೇಕಾಗಿದೆ.
ವಿಶ್ವ ಕರ್ಮವುಇಡಿ ಜಗತ್ತಿಗೆ ಮಾದರಿಯಾದ ಒಂದು ದರ್ಮ ಇವರು ತಮ್ಮ ಕರಕುಶಲತೆಯಿಂದ ಕಲ್ಲಿನಲ್ಲಿ ಕಟ್ಟಿಗೆಯಲ್ಲಿ ಚಿನ್ನ ಬೆಳ್ಳಿ ಇತ್ಯಾದಿ ವಸ್ತುಗಳಿಂದ ವಿವಿಧ ಮೂರ್ತಿಗಳನ್ನು ನಿರ್ಮಿಸಿ ವಿಶ್ವದ ಜನರಲ್ಲಿ ಮಾದರಿಯಾದ ಕುಲವನ್ನು ಇಂದು ದಿನಾಂಕ 17 ರಂದು ಸ್ಥಳೀಯ ವಿಶ್ವಕರ್ಮ ಕುಲಬಾಂದವರು ಆಚರಿಸಿ ಹೋಸ ಆದ್ಯತೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಕುಲಬಾಂದವರಲ್ಲಿ ಅರಳುತ್ತಿರುವ ಪ್ರತಿಭೆಗಳನ್ನು ಗುರುತಿಸಿ ಅಂತಃ ಬಡ ಪ್ರತಿಭಾನ್ವೀತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಕಲಿಕಾ ಸಾಮಗ್ರಿಗಳ ಜೋತೆಗೆ ನಗದು ರೂಪದಲ್ಲಿ ಸಹಾಯ ಹಸ್ತ ನಿಡುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳೀಯ ಗ್ರಾ ಪಂ ಸಭಾಭವನದಲ್ಲಿ ವಿಶ್ವಕರ್ಮ ಬಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಸಮುದಾಯದ ಮುಖಂಡರನ್ನು ಸನ್ಮಾನಿಸಲಾಯಿತು ಈ ಸಂದರ್ಬದಲ್ಲಿ ಕ ಸಾ ಪ ಅಧ್ಯಕ್ಷರಾದ ಪ್ರಕಾಶ ಅವಲಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು ಈ ಸಂದರ್ಬದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿ ಕುಮಾರಿ ಲಕ್ಷ್ಮೀ ರಾಜು ಪತ್ತಾರ ಬಿ ಕಾಂ ಕುಮಾರಿ ಪ್ರೀಯದರ್ಶಿನಿ ಕಮ್ಮಾರ ಬಿ ಎ ವಿದ್ಯಾರ್ಥಿನಿ ಕುಮಾರಿ ವೇದಾ ಪತ್ತಾರ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಯಮಕನಮರಡಿ ಪಂಚಾಯತಿ ಅಬಿವೃದ್ದಿ ಅಧಿಕಾರಿ ಶಿವಲಿಂಗ ಡಂಗ, ಗ್ರಾ ಪಂ ಅಧ್ಯಕ್ಷರು, ಸದಸ್ಯರು ಸಿಬ್ಬಂದಿ ವರ್ಗ ವಿಶ್ವಕರ್ಮ ಸಮುದಾಯದ ಅಧ್ಯಕ್ಷರಾದ ಶಿವುಕುಮಾರ ಪೋತದಾರ ಪ್ರದೀಪ ಪೋತದಾರ ಸೇರಿದಂತೆ ಅಪಾರ ವಿಶ್ವಕರ್ಮದ ಸದಸ್ಯರು ಯುವಕಮಿತ್ರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 