ಮೃತಪಟ್ಟವರ ಕುಟುಂಬಕ್ಕೆ 25ಲಕ್ಷ ರೂ ಪರಿಹಾರಕ್ಕಾಗಿ ವಾಟಾಳ್ ಆಗ್ರಹ

ಮೃತಪಟ್ಟವರ ಕುಟುಂಬಕ್ಕೆ 25ಲಕ್ಷ ರೂ ಪರಿಹಾರಕ್ಕಾಗಿ ವಾಟಾಳ್ ಆಗ್ರಹ

ಮೈಸೂರು, ಆಗಸ್ಟ್ 11   ರಾಜ್ಯದಲ್ಲಿ ಉಂಟಾಗಿರುವ ಭೀಕರ ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಕುಟುಂಬಕ್ಕೆ 25 ಲಕ್ಷ ರೂ ಸರ್ಕಾರ ಪರಿಹಾರ ನೀಡಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ರವಿವಾರ ಆಗ್ರಹಿಸಿದ್ದಾರೆ.  ಇಂದು ಮೈಸೂರಿನ ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದ ವಾಟಾಳ್, ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹೀಗಾಗಿ ಶೀಘ್ರವಾಗಿ ಪರಿಹಾರ ಕ್ರಮ ಕೈಗೊಂಡು ನೆರವು ನೀಡಬೇಕಾದ ಅಗತ್ಯವಿದೆ. ಸಮಗ್ರ ನವ ಕರ್ನಾಟಕ ಪುನರ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು. ಮಂಗಳವಾರ ಉತ್ತರ ಕರ್ನಾಟಕ ಭೇಟಿ ನೀಡಿ, ಪರಿಹಾರ ಕಾರ್ಯ ಹೇಗೆ ಸಾಗಿದೆ ಎಂದು ಪರಿಶೀಲಿಸುತ್ತೇನೆ ಎಂದು ಅವರು ತಿಳಿಸಿದರು.