ಕಾಗವಾಡ 08: ಹನ್ನೆರಡು ತಿಂಗಳ ಒಳಗಾಗಿ ನಮ್ಮ ಮನವಿಗೆ ಸರಿಯಾದ ರೀತಿಯಲ್ಲಿ ಸ್ಪಂದನೆ ನೀಡದಿದ್ದರೆ ಇನ್ನೂ ಹನ್ನೆರಡು ವರ್ಷದಲ್ಲಿ ಸಲ್ಲೇಖನ ವೃತವನ್ನು ಸ್ವೀಕರಿಸಲಾಗುವುದೆಂದು ಸರ್ಕಾರಕ್ಕೆ ಖಡಕ ಎಚ್ಚರಿಕೆ ನೀಡಿದರು ಇವತ್ತು ವಿವಿಧ ಬೇಡಿಕೆ ಈಡೇರಿಕೆಗಾಗಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ ಆದಷ್ಟು ಬೇಗನೆ ಒಳ್ಳೆಯ ಸಂದೇಶ ಬರುವುದೆಂದು ನೀರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದರು.
ಜೈನರಿಗೆ ನಿಗಮ ಮಂಡಳಿಗೆ ಆಗ್ರಹಿಸಿ ಐನಾಪುರದಲ್ಲಿ ಶ್ರೀ ಗುಣಧರನಂದಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಬೃಹತ ಸಮಾವೇಶದಲ್ಲಿ ಸಾಗರೋಪಾದಿಯಲ್ಲಿ ಜನ ಹರಿದು ಬಂದಿತ್ತು. ಭಟ್ಟಾರಕರ ಪಾವನ ಸನ್ನಿಧಾನದಲ್ಲಿ ಕಾರ್ಯಕ್ರಮಕ್ಕೆ ಅಥಿತಿಗಳಾಗಿ ಆಗಮಿಸಿದ ರಾಜ್ಯ ಪಾಲಾರದ ಥಾವರ್ ಚಂದ್ ಗೆಲ್ಹೋಟ ಹಾಗೂ ,ಗಣ್ಯರು ದ್ವೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ವೇದಿಕೆಯಲ್ಲಿ ಹಾಲಿ ಮಾಜಿ ಶಾಸಕರು ಹಾಗೂ ರಾಜಕೀಯ ಧೂರಿನರು ಆಗಮಿಸಿ ಸಮಾವೇಶಕ್ಕೆ ಬೆಂಬಲ ನೀಡಿದರು.
ಮೂರು ದಿನಗಳಿಂದ ನಡೆಯುತ್ತಿರುವ ಸಮಾವೇಶಕ್ಕೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿದ್ದರು. ರಾಷ್ಟ್ರ ಸಂತ ಗುಣಧರನಂದಿ ಮಹಾರಾಜರು ಮಾತನಾಡಿ, ಜೈನ ಸಮುದಾಯ ಬೇಡಿಕೆಗಳನ್ನು ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ, ಇದುವರೆಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲಾ ಇವತ್ತು ಈ ಸಮಾವೇಶದ ಮಾಡಲಾಗಿದೆ ಇನ್ನು ಮುಂದೆ ಸಿದ್ದರಾಮಯ್ಯ ನಿದ್ದೆಗೆ ಭಂಗ ತರುವುದು ಸಿದ್ದ ನಾವು ನಿಮಗೆ ಮತ ನಿಡಿದ್ದೇವೆ ನೀವು ನಮಗೆ ಉಪಕಾರ ಮಾಡಿ ನಮ್ಮ ಮಠಗಳಿಗೆ ಅನುದಾನ ಕೊಡಬೇಡಿ, ನಮ್ಮ ಜೈನ ಸಮುದಾಯ ಮಹಿಳಿಯರಿಗೆ ಸರ್ಕಾರ ವತಿಯಿಂದ ಶಿಖರಜೀ ಯಾತ್ರೆ ಹೊಗುದಕ್ಕೆ ಯೋಜನೆ ಮಾಡಿ, ಜೈನ ಸಮುದಾಯಕ್ಕೆ ನಿಗಮ ಮಂಡಳಿ ರಚನೆ ಜೊತೆಗೆ ಪ್ರಮುಖ ಏಳು ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಲಾಗಿದೆ ಎಂದರು.
ನಾವು ಚಿಕ್ಕೋಡಿಯಲ್ಲಿ ಲಕ್ಷಾಂತರ ಮಂದಿ ಇದ್ದೆವೆಆದರೆ ಸರ್ಕಾರ ಜನಗಣತಿ ವರದಿಯಲ್ಲಿ ಒಂದುವರೆ ಲಕ್ಷ ಜನ ಎಂದು ವರದಿ ನಿಡಿದೆ ಎಂದು ಜನಗಣತಿ ವರದಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಹಿಂದೆ ಜೈನ ಸಮುದಾಯದ ಅಭಿವೃದ್ಧಿಗೆ ಕೊಟ್ಯಾಂತರ ರೂಪಾಯಿ ಅನುದಾನ ಬಿಡುಗಡೆ ಆಗುತಿತ್ತು ಆದರೆ ಸದ್ಯಕ್ಕೆ ಸರ್ಕಾರ ಅತಿಕಡಿಮೆ ಅನುದಾನ ಬಿಡುಗಡೆ ಮಾಡುತ್ತಿದೆ ಎಂದು ಬರುವ ಬಜೇಟನಲ್ಲಿ ಅನುದಾನ ಬಿಡುಗಡೆ ಮುನಿಗಳು ಒತ್ತಾಯಿಸಿದರು. ಜೈನ ಸಮುದಾಯ ಪ್ರಮುಖ ಬೇಡಿಕೆಗಳು: ಜೈನ ಸಮುದಾಯ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ, ಜೈನ ಸಮುದಾಯ ಬಡವರು ಶಿಖರಜಿಗೆ ತೆರಳಲು ಅನುದಾನ ನೀಡಬೇಕು, ಜೈನ ಧರ್ಮದ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು, ಪ್ರತಿ ಜಿಲ್ಲೆಯಲ್ಲಿ ಜೈನ ವಸತಿಗೃಹ ನಿರ್ಮಿಸಬೇಕು. ಬಡವರಿಗೆ ಉಚಿತ ಚಿಕಿತ್ಸೆ ಆಸ್ಪತ್ರೆಗಳನ್ನು ನಿರ್ಮಿಸಬೇಕು, ಪ್ರತಿ ಹಳ್ಳಿಗಳಲ್ಲಿ ಮುನಿ ನಿವಾಸ, ಮಂಗಲ ಕಾರ್ಯಾಲಯ ನಿರ್ಮಿಸಬೇಕು, ಜೈನ್ ಮುನಿಗಳ ರಕ್ಷಣೆ ಸರ್ಕಾರ ಮುಂದಾಗಬೇಕು ಎಂದರು.ಇದೆ ವೇಳೆ ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ ಮಾತನಾಡಿ ಚಿಕ್ಕೋಡಿಯಲ್ಲಿ ಕಾಲೇಜು ಕಟ್ಟಡಕ್ಕೆ ಸುಮಾರು 5 ಕೋಟಿ ಹಣ ನೀಡುವುದಾಗಿ ಹೇಳಿದರು.ಹಾಗೂ ತಮ್ಮ ಬೇಡಿಕೆಗೆ ಸರ್ಕಾರದ ಜೊತೆ ಚರ್ಚೆ ನಡೆಸುತ್ತೇವೆ ಎಂದರು.