ತ್ರಿಪುರಾ : ಆನೆಗಳ ದಾಳಿಗೆ ರಿಕ್ಷಾ ಜಖಂ, ಚಾಲಕನಿಗೆ ಗಾಯ
ಅಗರ್ತಲ, ಜೂನ್ 04,ಪಶ್ಚಿಮ ತ್ರಿಪುರಾದ ಖೋವಾಯ್ ಜಿಲ್ಲೆಯ ಅಥರಮುರಾ ಬೆಟ್ಟ ಶ್ರೇಣಿಯ ತಪ್ಪಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡು ಆನೆಗಳ ಹಿಂಡು ನಡೆಸಿದ ದಾಳಿಯಲ್ಲಿ ಆಟೋರಿಕ್ಷಾ ಜಖಂಗೊಂಡು ಚಾಲಕನಿಗೆ ಗಾಯಗಳಾಗಿವೆ. ತೆಲಿಯಮುರಾ ಉಪವಿಭಾಗದ ಕೃಷ್ಣಾಪುರ ಪ್ರದೇಶದ ಬಳಿ ಆಟೋರಿಕ್ಷಾ ಮೇಲೆ ಏಕಾಏಕಿ ದಾಳಿ ನಡೆಸಿವೆ. ಚಾಲಕ ಅಭಿಜಿತ್ ಧಾರ್ ಇಬ್ಬರು ಪ್ರಯಾಣಿಕರೊಡನೆ ತೇಲಿಯಮುರದ ನೇತಾಜಿನಗರದಿಂದ ಮಹಾರಾನಿಪುರಕ್ಕೆ ಮುಸ್ಸಜೆಯಲ್ಲಿ ಹೊರಟಿದ್ದರು.
ಆಟೋರಿಕ್ಷಾ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಮೂರು ಆನೆಗಳು ಎದುರಾದವು. ಕೂಡಲೇ ಜಿಗಿದ ಪ್ರಯಾಣಿಕರು ಸ್ಥಳದಿಂದ ಓಡಿಹೋದರು. ಆದರೆ ಆನೆಗಳು ಆಟೋದಿಂದ ಹೊರಗೆ ಹೋಗಲು ಬಿಡದೆ ಚಾಲಕನ ಮೇಲೆ ಹಲ್ಲೆ ನಡೆಸಿದವಾದರೂ, ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಗಯಗೊಂಡ ಚಾಲಕನ ಕೂಗು ಕೇಳಿದ ಗ್ರಾಮಸ್ಥರು ಆತನನ್ನು ತೆಲಿಯಮುರಾ ಆಸ್ಪತ್ರೆಗೆ ದಾಖಲಿಸಿದ್ದು, ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ. ಅಥರಮುರಾ ತಪ್ಪಲನ್ನು ಆನೆ ಕಾರಿಡಾರ್ ಎಂದು ಗುರುತಿಸಲಾಗಿದೆ ಆಗಾಗ್ಗೆ ಅವು ಆಹಾರ ಅರಸಿ ಇಲ್ಲಿಗೆ ಬರುತ್ತವೆ. ರಾಜ್ಯ ಸರ್ಕಾರವು ಈ ಹಿಂದೆ ಜಂಬೋ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸುವ ಪ್ರಸ್ತಾಪವನ್ನು ಕಳುಹಿಸಿತ್ತು. ಆದರೆ ಕೇಂದ್ರದಿಂದ ಹಣ ಲಭ್ಯವಿಲ್ಲದ ಕಾರಣ ಅದನ್ನು ನಿಲ್ಲಿಸಬೇಕಾಯಿತು. ಇದರ ಪರಿಣಾಮವಾಗಿ, ಪ್ರತಿವರ್ಷ ಈ ಪ್ರದೇಶದ ಬಡ ರೈತರು ಬೆಳೆ ಹಾಗೂ ಇನ್ನಿತರ ವಸ್ತು, ಉತ್ಪನ್ನಗಳನ್ನು ಕಳೆದುಕೊಳ್ಳುತ್ತಿರುವುದಲ್ಲದೆ, ಅನೇಕ ಜನರ ಮನೆಗಳು ಹಾನಿಗೀಡಾಗಿವೆ.
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ 