ಪ್ರವಾಸಿ ದೋಣಿ ದುರಂತ: 9 ಮೃತದೇಹ ಪತ್ತೆ, ಇನ್ನೂ 24 ಮಂದಿ ಸಾವು ಶಂಕೆ, 27 ಜನರ ರಕ್ಷಣೆ
ವಿಜಯವಾಡ, ಸೆ 16 ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ದೇವಿಪಟ್ಟಣಂ ಮಂಡಲದ ಕಚ್ಚುಲೂರು ಗ್ರಾಮದ ಸಮೀಪ ಗೋದಾವರಿ ನದಿಯಲ್ಲಿ ಭಾನುವಾರ ಖಾಸಗಿ ಪ್ರವಾಸಿ ದೋಣಿಯೊಂದು ದುರಂತಕ್ಕೀಡಾದ ಘಟನೆಯಲ್ಲಿ ಇದುವರೆಗೆ 9 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇನ್ನೂ 24 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ.
ಗೋದಾವರಿ ನದಿಯಲ್ಲಿ 60 ಪ್ರಯಾಣಿಕರಿದ್ದ ದೋಣಿ ದುರಂತಕ್ಕೀಡಾದ ನಂತರ 27 ಜನರನ್ನು ರಕ್ಷಿಸಲಾಗಿದೆ ಎಂದು ಆಂಧ್ರ ಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಪಿಎಸ್ಡಿಎಂಎ) ಮತ್ತು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್ಇಒಸಿ) ಸೋಮವಾರ ವರದಿ ಮಾಡಿದೆ.
ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳ 6 ಅಗ್ನಿಶಾಮಕ ತಂಡಗಳು 8 ದೋಣಿಗಳಲ್ಲಿ ಅಗತ್ಯ ಸಾಧನಗಳೊಂದಿಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ವರದಿ ತಿಳಿಸಿದೆ.
ಸುಮಾರು ಎರಡು ಎನ್ಡಿಆರ್ಎಫ್ ಮತ್ತು ಮೂರು ಎಸ್ಡಿಆರ್ಎಫ್ ತಂಡಗಳನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ. ಮುಳುಗಿರುವ ಪ್ರಯಾಣಿಕರ ಶೋಧಕ್ಕೆ ಅಗತ್ಯವಿರುವ ಎಲ್ಲಾ ರಕ್ಷಣಾ ಮತ್ತು ಸಂವಹನ ಸಾಧನಗಳೊಂದಿಗೆ ರಕ್ಷಣಾ ಕಾರ್ಯಾಚರಣೆಯಲ್ಲಿ ಈ ತಂಡಗಳು ತೊಡಗಿವೆ.
ಭಾರತೀಯ ನೌಕಾಪಡೆಯ ಒಂದು ಈಜು ತಂಡ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ. ಎರಡು ನೌಕಾಪಡೆಯ ಎರಡು ಹಾಗೂ ಒಎನ್ಜಿಸಿಯ ಒಂದು ಹೆಲಿಕಾಪ್ಟರ್ ಅನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ.
ಉತ್ತರಾಖಂಡದಿಂದ 'ಸೈಡ್ ಸ್ಕ್ಯಾನ್ ಸೋನಾರ್' ಉಪಕರಣ ಹೊಂದಿರುವ ವಿಶೇಷ ಈಜು ತಜ್ಞರ ಮಂದಿಯ ತಂಡ ಅಲ್ಲಿನ ಎಸ್ಡಿಆರ್ಎಫ್ ಪಡೆಯೊಂದಿಗೆ ಸ್ಥಳಕ್ಕೆ ಇಂದು ಆಗಮಿಸಲಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 