ಇಂದು ಸಂಜೆ ತಿಮ್ಮಪ್ಪನ ಬಾಗಿಲು ಬಂದ್
ಅಮರಾವತಿ(ಆಂಧ್ರಪ್ರದೇಶ) 26: ನಾಳೆ ನಭೋಮಂಡಲದಲ್ಲಿ ಕೌತುಕವೊಂದು ನಡೆಯಲಿದೆ. ಈ ಚಂದ್ರನ ಕೌತುಕಕ್ಕೆ ಬ್ಲಡ್ಮೂನ್ ಗ್ರಹಣ ಎಂದು ಹೆಸರಿಸಲಾಗಿದೆ. ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಇರುವುದಿಲ್ಲ.
ಗ್ರಹಣದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ದೇಗುಲದ ಬಾಗಿಲನ್ನು ಮುಚ್ಚಲಾಗುತ್ತದೆ ಎಂದು ಟಿಟಿಡಿ ಜಂಟಿ ಕಾರ್ಯನಿವರ್ಾಹಕ ಅಧಿಕಾರಿ ಕೆ. ಎಸ್. ಶ್ರೀನಿವಾಸರಾಜು ಪ್ರಕಟಿಸಿದ್ದಾರೆ.
ನಾಳೆ ರಾತ್ರಿ 11.54ರಿಂದ ಶನಿವಾರ ಬೆಳಗಿನ ಜಾವ 3.49 ಗಂಟೆವರೆಗೂ ಗ್ರಹಣ ಇರಲಿದೆ. ಹೀಗಾಗಿ ನಾಳೆ ಸಂಜೆ 5 ಗಂಟೆಗೆ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತಿದೆ ಎಂದು ಪ್ರಕಟಣೆ ಮೂಲಕ ಆಡಳಿತ ಮಂಡಳಿ ಪ್ರಕಟಿಸಿದೆ.
ಶುಕ್ರವಾರ ಸಂಜೆಯಿಂದ ಶನಿವಾರ ಬೆಳಗಿನ ವರೆಗೂ ದೇವಸ್ಥಾನದ ಬಾಗಿಲು ಹಾಕಲಾಗುವುದು. ಹೀಗಾಗಿ ಶುಕ್ರವಾರ ನಡೆಯಬೇಕಿದ್ದ ಅಜರ್ಿತ ಸೇವಾ, ಕಲ್ಯಾಣೋತ್ಸವ, ಉಂಜಲ ಸೇವಾ, ವಸಂತೋತ್ಸವಂ, ಪೌರ್ಣಮಿ ಗರುಡ ಸೇವೆಗಳನ್ನು ರದ್ದುಪಡಿಸಲಾಗಿದ್ದು, ಶನಿವಾರ ಅಂದರೆ, ಜು.28ರ ಬೆಳಗಿನ ಜಾವ 4.15ಕ್ಕೆ ಸುಪ್ರಭಾತ ಸೇವೆ, ಶುದ್ಧಿ ಮತ್ತು ಪುಣ್ಯಾಹವಚನದ ಮೂಲಕ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ನೀಡಲಾವುದು ಎಂದು ಶ್ರೀನಿವಾಸರಾಜು ತಿಳಿಸಿದ್ದು, ಶನಿವಾರ ಬೆಳಗ್ಗೆಯಿಂದ ಎಂದಿನಂತೆ ಪೂಜಾ ಕೈಂಕರ್ಯಗಳು ಮುಂದುವರೆಯಲಿವೆ ಎಂದು ತಿಳಿಸಿದ್ದಾರೆ.
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ 