ಇಂದು 8ನೇ ವಾರ್ಷೀಕೋತ್ಸವ, ವಿಶ್ವಪರಿಸರ ದಿನಾಚರಣೆ
ತಾಳಿಕೋಟೆ, 08 : ಪಟ್ಟಣದ ಹಸಿರು ಸಂಪದ ಬಳಗದ 8 ನೆಯ ವಾರ್ಷೀಕೋತ್ಸವ ಹಾಗೂ ವಿಶ್ವಪರಿಸರ ದಿನವನ್ನು ಭಾನುವಾರ ಬೆಳಿಗ್ಗೆ 7.00 ಗಂಟೆಗೆ ದೇವರ ಹಿಪ್ಪರಗಿ ರಸ್ತೆಯಲ್ಲಿರುವ ಲಕ್ಷ್ಮೀ ದೇವಸ್ಥಾನದ ಉದ್ಯಾನದಲ್ಲಿ ಸಸಿ ನೆಡುವ ಮೂಲಕ ಆಚರಿಸಲಾಗುವುದು ಎಂದು ಹಸಿರು ಸಂಪದ ಬಳಗದ ಪ್ರಮುಖ ರಾಜು ಹಂಚಾಟೆ ತಿಳಿಸಿದರು.
ಅರಣ್ಯ ಇಲಾಖೆ, ಪುರಸಭೆ ಸಹಯೋಗದಲ್ಲಿ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು. ಇದೇ ಸಂದರ್ಭದಲ್ಲಿ ಬಳಗದ ಸದಸ್ಯ ಶಫೀಕ ಇನಾಮದಾರ ಅವರು ಬಕ್ರಿದ್ ಹಬ್ಬದ ಪ್ರಯುಕ್ತ ಹಾಜರಿದ್ದ ಸದಸ್ಯರುಗಳಿಗೆ ಸಿಹಿ ಸುರಕುರಂ ವಿತರಣೆ ಮಾಡಿ, ಬಕ್ರಿದ ಹಬ್ಬದ ಮಹತ್ವ ಕುರಿತು ತಿಳಿಸಿದರು. ಸಭೆಯಲ್ಲಿ ಡಾ.ಶ್ರೀಶೈಲ ಹುಕ್ಕೇರಿ, ಆರಿ್ವ.ಜಾಲವಾದಿ, ಶ್ರೀಕಾಂತ ಪತ್ತಾರ, ಅಪ್ಪಾಸಾಹೇಬ ಮೂಲಿಮನಿ, ಕಾಶಿನಾಥ ಸಜ್ಜನ, ಯಲ್ಲೇಶ ದಾಯಪುಲೆ, ಕಿರಣ ಬಡಿಗೇರ, ಸಂಚಾಲಕ ಎಸ್.ಎಸ್.ಗಡೇದ, ಅನಿಲ ಇರಾಜ, ಸಿ.ವಿ.ಮೆಣಸಿನಕಾಯಿ, ಅರಣ್ಯ ಇಲಾಖೆಯ ಮಹಾಂತೇಶ ಹಾದಿಮನಿ, ಪರಮಣ್ಣ ಪಾಟೀಲ ಇದ್ದರು.