ಇಂದು 8ನೇ ವಾರ್ಷೀಕೋತ್ಸವ, ವಿಶ್ವಪರಿಸರ ದಿನಾಚರಣೆ
Today is the 8th anniversary of World Environment Day.
ಇಂದು 8ನೇ ವಾರ್ಷೀಕೋತ್ಸವ, ವಿಶ್ವಪರಿಸರ ದಿನಾಚರಣೆ
ತಾಳಿಕೋಟೆ, 08 : ಪಟ್ಟಣದ ಹಸಿರು ಸಂಪದ ಬಳಗದ 8 ನೆಯ ವಾರ್ಷೀಕೋತ್ಸವ ಹಾಗೂ ವಿಶ್ವಪರಿಸರ ದಿನವನ್ನು ಭಾನುವಾರ ಬೆಳಿಗ್ಗೆ 7.00 ಗಂಟೆಗೆ ದೇವರ ಹಿಪ್ಪರಗಿ ರಸ್ತೆಯಲ್ಲಿರುವ ಲಕ್ಷ್ಮೀ ದೇವಸ್ಥಾನದ ಉದ್ಯಾನದಲ್ಲಿ ಸಸಿ ನೆಡುವ ಮೂಲಕ ಆಚರಿಸಲಾಗುವುದು ಎಂದು ಹಸಿರು ಸಂಪದ ಬಳಗದ ಪ್ರಮುಖ ರಾಜು ಹಂಚಾಟೆ ತಿಳಿಸಿದರು.
ಅರಣ್ಯ ಇಲಾಖೆ, ಪುರಸಭೆ ಸಹಯೋಗದಲ್ಲಿ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು. ಇದೇ ಸಂದರ್ಭದಲ್ಲಿ ಬಳಗದ ಸದಸ್ಯ ಶಫೀಕ ಇನಾಮದಾರ ಅವರು ಬಕ್ರಿದ್ ಹಬ್ಬದ ಪ್ರಯುಕ್ತ ಹಾಜರಿದ್ದ ಸದಸ್ಯರುಗಳಿಗೆ ಸಿಹಿ ಸುರಕುರಂ ವಿತರಣೆ ಮಾಡಿ, ಬಕ್ರಿದ ಹಬ್ಬದ ಮಹತ್ವ ಕುರಿತು ತಿಳಿಸಿದರು. ಸಭೆಯಲ್ಲಿ ಡಾ.ಶ್ರೀಶೈಲ ಹುಕ್ಕೇರಿ, ಆರಿ್ವ.ಜಾಲವಾದಿ, ಶ್ರೀಕಾಂತ ಪತ್ತಾರ, ಅಪ್ಪಾಸಾಹೇಬ ಮೂಲಿಮನಿ, ಕಾಶಿನಾಥ ಸಜ್ಜನ, ಯಲ್ಲೇಶ ದಾಯಪುಲೆ, ಕಿರಣ ಬಡಿಗೇರ, ಸಂಚಾಲಕ ಎಸ್.ಎಸ್.ಗಡೇದ, ಅನಿಲ ಇರಾಜ, ಸಿ.ವಿ.ಮೆಣಸಿನಕಾಯಿ, ಅರಣ್ಯ ಇಲಾಖೆಯ ಮಹಾಂತೇಶ ಹಾದಿಮನಿ, ಪರಮಣ್ಣ ಪಾಟೀಲ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 