ವಿಕಲಚೇತನರ ತಿರಂಗಾ ಯಾತ್ರೆ

ವಿಜಯಪುರ12 : 75 ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯ ವಿಕಲಚೇತನರಿಂದ ಅ.13ರಂದು ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ತಿರಂಗಾ ಯಾತ್ರೆಯು ಬೆಳಗ್ಗೆ 10 ಗಂಟೆಗೆ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಗಾಂಧಿ ಚೌಕ ಮಾರ್ಗವಾಗಿ ಬಸವೇಶ್ವರ ವೃತ್ತ , ಅಂಬೇಡ್ಕರ ವೃತ್ತದವರೆಗೆ ಸಾಗುವುದು. ಜಿಲ್ಲೆಯ ಮತ್ತು ಎಲ್ಲ ತಾಲೂಕಿನ ವಿಕಲಚೇತನರು ಭಾಗಿಯಾಗಿ ತಿರಂಗಾ ಯಾತ್ರೆ ಯಶಸ್ವಿಗೊಳಿಸಬೇಕೆಂದು ವಿಕಲಚೇತನರ ಅಧ್ಯಕ್ಷರಾದ ಭೀಮನಗೌಡ .ಬಿ. ಪಾಟೀಲ(ಸಾಸನೂರ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.