ಅಯೋಧ್ಯೆಯಲ್ಲೇ ಪರ್ಯಾಯ ಜಮೀನು ಕೊಡಬೇಕೆಂದೇನೂ ಇಲ್ಲ
ನವದೆಹಲಿ, ನ 9 : ರಾಮಜನ್ಮ ಭೂಮಿ - ಬಾಬರಿ ಮಸೀದಿ ದೀರ್ಘಕಾಲೀನ ವಿವಾದಕ್ಕೆ ಸುಪ್ರೀಂಕೋರ್ಟ್ ಇಂದು ತೆರೆ ಎಳೆದಿದೆ. ವಿವಾದಿತ 2.77 ಎಕರೆ ಜಮೀನು ರಾಮ ಲಲ್ಲಾಗೆ ಸೇರಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠ ಒಮ್ಮತದ ತೀಪು ನೀಡಿದೆ. ಇದಕ್ಕೆ ಪರಿಹಾರವಾಗಿ ಸುನ್ನಿ ವಕ್ಫ್ ಮಂಡಳಿಗೆ ಐದು ಎಕರೆ ಜಮೀನನ್ನು ಉತ್ತರಪ್ರದೇಶ ಸರ್ಕಾರ ಕೊಡಬೇಕು ಎಂದು ತೀರ್ಪುನಲ್ಲಿ ಹೇಳಿದ್ದರೂ, ಅಯೋಧ್ಯೆಯಲ್ಲೇ ಕೊಡಬೇಕು ಎಂಬ ನಿರ್ಬಂಧಗಳೇನೂ ಇಲ್ಲ ಎಂಬುದಾಗಿ ಕಾನೂನು ಪಂಡಿತರು ತೀರ್ಪನ್ನು ವ್ಯಾಖ್ಯಾನ ಮಾಡಿದ್ದಾರೆ. ಸುನ್ನಿ ವಕ್ಫ್ ಮಂಡಳಿಯ ಮನವಿಯ ಮೇರೆಗೆ ಅಯೋಧ್ಯೆಯಲ್ಲೇ ಐದು ಎಕರೆ ಜಮೀನನ್ನು ಅಯೋಧ್ಯೆಯಲ್ಲೇ ಕೊಡಬಹುದು ಇಲ್ಲವಾದಲ್ಲಿ ಮಸೀದಿ ನಿರ್ಮಾಣಕ್ಕಾಗಿ ರಾಜ್ಯದ ಯಾವುದೇ ಪ್ರದೇಶದಲ್ಲಾದರೂ ಐದು ಎಕರೆ ಜಮೀನು ಕೊಡಬಹುದು. ಆದರೆ ಐದು ಎಕರೆ ಜಮೀನನ್ನು ಇಂತಹ ಸ್ಥಳದಲ್ಲೇ ಕೊಡಬೇಕು ಎಂದು ತೀರ್ಪುನಲ್ಲಿ ಸ್ಪಷ್ಟಪಡಿಸಿಲ್ಲ. ವಕ್ಫ್ ಮಂಡಳಿ ಕೋರಿಕೆ ಬಂದಲ್ಲಿ ಮಾತ್ರ ಅಯೋಧ್ಯೆಯಲ್ಲಿ ಜಮೀನು ನೀಡಬಹುದು, ಇಲ್ಲವಾದಲ್ಲಿ ರಾಜ್ಯ ಸರ್ಕಾರ ತನ್ನ ವಿವೇಚನೆಯನ್ನು ಬಳಸಿ ಬೇರೆ ನಗರಗಳಲ್ಲಿ ಮಸೀದಿ ನಿರ್ಮಾಣಕ್ಕೆ ಜಾಗ ಕೊಡಬಹುದು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 