ಪೊಲೀಸರ ಕಾರ್ಯ ಮೆಚ್ಚುವಂತಹದ್ದಾಗಿದೆ: ಶಾಸಕ ಸಾಸನೂರ
ಲೋಕದರ್ಶನವರದಿ
ತಾಳಿಕೋಟೆ೨೦: ತಮ್ಮ ಕುಟುಂಬವನ್ನು ಲೆಕ್ಕಿಸದೇ ಜನರಿಗೋಸ್ಕರ್ ಹಗಲು ರಾತ್ರಿ ಎನ್ನದೇ ಕೆಲಸ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳ ಸಿಬ್ಬಂದಿಗಳು ಸಕರ್ಾರದ ನಿಯಮದಂತೆ ಕಟ್ಟುನಿಟ್ಟಿನ ಕಾರ್ಯ ಮುಂದುವರೆಯಲಿ ಅದರಲ್ಲಿ ನಾನು ಎಂದೂ ಹಸ್ತಕ್ಷೇಪ ಮಾಡುವದಿಲ್ಲಾವೆಂದು ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರು ಹೇಳಿದರು.
ಬುಧವಾರರಂದು ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ತಮ್ಮ ವೈಯಕ್ತಿಕ ದಿನಸಿ ಕಿಟ್ಗಳನ್ನು ವಿತರಿಸಿ ಮಾತನಾಡುತ್ತಿದ್ದ ಅವರು ಕೊರೊನಾ ವೈರಸ್ ರೋಗ ಜನರಿಗೆ ತಗುಲದಿರಲಿ ಎಂಬ ಉದ್ದೇಶದಿಂದ ಲಾಕ್ಡೌನ್ ಸಡಿಲಿಕೆ ಮಾಡಿದ್ದರೂ ಕೂಡಾ ಕೆಲವು ನಿಯಮಗಳನ್ನು ಪಾಲನೆಗೆ ಸೂಚನೆಯನ್ನು ನೀಡಿದೆ ಆ ಸೂಚನೆಯ ಪಾಲನೆಯಲ್ಲಿ ಪೊಲೀಸ್ರು ಮೊದಲಿಗರಾಗಿ ಕೆಲಸ ನಿರ್ವಹಿಸುತ್ತಾ ಬಂದಿದ್ದೀರಿ ಅದರ ಜೊತೆಗೆ ಜನರಿಗೆ ಅಂತರ ಕಾಯ್ದುಕೊಳ್ಳಲು ಸಲಹೆಗಳನ್ನು ಮಾರ್ಗದರ್ಶನವನ್ನು ಮಾಡುತ್ತಾ ಸಾಗಿರುವದನ್ನು ಅಭಿನಂದನೆಯನ್ನು ಸಲ್ಲಿಸುತ್ತೇನೆಂದ ಅವರು ಮಹಾ ಮಾರಿ ಕೋರೊನಾ ವೈರಸ್ನ್ನು ಗೆಲ್ಲಲು ಯೋಧರಂತೆ ಎಲ್ಲರೂ ಕಾರ್ಯನಿರ್ವಹಿಸಬೇಕಿದೆ ಈ ರೋಗ ಪೊಲೀಸ್ರಿಗೆ ಬರುವದಿಲ್ಲಾವೆಂಬಂತಿಲ್ಲಾ ಇದು ಯಾರನ್ನೂ ಕೂಡಾ ಬಿಡುವದಿಲ್ಲಾ ಇಂತಹ ರೋಗಕ್ಕೆ ಸೈನಿಕರಂತೆ ಪೊಲೀಸ್ರು ಕಾರ್ಯನಿರ್ವಹಿಸಿ ಈಗಾಗಲೇ ಮಾಸ್ಕ್ಧರಿಸದವರಿಗೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸುತ್ತಾಡದವರಿಗೆ ತಮ್ಮದೇ ಆದ ರೀತಿಯಲ್ಲಿ ತಿಳುವಳಿಕೆ ಹೇಳುತ್ತಾ ಸಾಗಿದ್ದಾರೆ ಈ ಕಾರ್ಯದಲ್ಲಿ ಪೊಲೀಸ್ ಸಿಬ್ಬಂದಿಗಳು ಮುಖ್ಯವಾಹಿನಿಯಲ್ಲಿ ಉತ್ತಮ ರೀತಿಯಿಂದ ಕಾರ್ಯನಿರ್ವಹಿಸುತ್ತಿರುವದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಸಮಯದಲ್ಲಿ ತಾಲೂಕಾ ತಹಶಿಲ್ದಾರ ಅನೀಲಕುಮಾರ ಢವಳಗಿ, ಬಿಇಓ ರೇಣುಕಾ ಕಲ್ಬುಗರ್ಿ, ತಾಪಂ ಇಓ ಮಂಜುನಾಥ ಶಿವಪೂರೆ, ಪಿ.ಎಸ್.ಆಯ್.ವಸಂತ ಬಂಡಗಾರ, ಪೊಲೀಸ್ ಸಿಬ್ಬಂದಿಗಳಾದ ಬಸವರಾಜ ಕಳ್ಳಿಗುಡ್ಡ, ಗೀರೀಶ ಚಲವಾದಿ, ಎಂ.ಎಲ್.ಪಟ್ಟೇದ, ಆರ್.ಎಸ್.ವಡೆಯರ, ಎಸ್.ಕೆ.ಕುಂಟೋಜಿ, ಶಿವನಗೌಡ ಬಿರಾದಾರ, ಗುರು ನಾಯಕ, ಎಂ.ಎಲ್.ಅವಟಿ, ಸೋಮು ರಾಠೋಡ, ಚಾಂದ ವಠಾರ, ಒಳಗೊಂಡು ಹೋಮಗಾರ್ಡ ಸಿಬ್ಬಂದಿಗಳು, ಉಪಸ್ಥಿತರಿದ್ದರು.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 