ಮ್ಯಾನ್ಮಾರ್ನಲ್ಲಿ ಅಪಹರಣಕ್ಕೀಡಾಗಿದ್ದ ಐವರು ಭಾರತೀಯರ ಬಿಡುಗಡೆ
ನವದೆಹಲಿ, ನವೆಂಬರ್ 5: ಕೇಂದ್ರ ಸರ್ಕಾರದ ಸಮಯೋಚಿತ ಮಧ್ಯಪ್ರವೇಶದಿಂದಾಗಿ, ಮ್ಯಾನ್ಮಾರ್ನ ರಾಖೈನ್ ರಾಜ್ಯದಲ್ಲಿ ಅರಾಕನ್ ಸೈನಿಕರಿಂದ ಅಪಹರಣಕ್ಕೊಳಗಾದ ಐವರು ಭಾರತೀಯ ಪ್ರಜೆಗಳು, ಮ್ಯಾನ್ಮಾರ್ನ ಓರ್ವ ಸಂಸತ್ ಸದಸ್ಯ ಹಾಗೂ ಇತರ ನಾಲ್ವರು ಮ್ಯಾನ್ಮಾರ್ ಪ್ರಜೆಗಳು ಬಿಡುಗಡೆಯಾಗಿದ್ದಾರೆ. ನವೆಂಬರ್ 3 ರಂದು, ಈ ಐದು ಭಾರತೀಯ ಪ್ರಜೆಗಳು, ಮ್ಯಾನ್ಮಾರ್ ಸಂಸತ್ ಸದಸ್ಯ, ಇಬ್ಬರು ಸ್ಥಳೀಯ ಸಾರಿಗೆದಾರರು ಮತ್ತು ಇಬ್ಬರು ಸ್ಪೀಡ್ ಬೋಟ್ ಆಪರೇಟರ್ಗಳನ್ನು ಮ್ಯಾನ್ಮಾರ್ನ ರಾಖೈನ್ ರಾಜ್ಯದ ಚಿನ್ ಎಂಬಲ್ಲಿನ ಪ್ಯಾಲೆಟ್ವಾದಿಂದ ಅರಾಕನ್ ಸೈನ್ಯವು ಅಪಹರಿಸಿತ್ತು. ಅಪಹರಣಕ್ಕೊಳಗಾದ ಭಾರತೀಯರು ಪ್ರಸ್ತುತ ಮ್ಯಾನ್ಮಾರ್ನಲ್ಲಿ ಕಲಾದನ್ ರಸ್ತೆ ಯೋಜನೆಯನ್ನು ನಿರ್ಮಿಸುವಲ್ಲಿ ನಿರತರಾಗಿದ್ದರು ಎಂದು ಗೃಹ ಸಚಿವಾಲಯದ ಅಧಿಕೃತ ಹೇಳಿಕೆ ಮಂಗಳವಾರ ತಿಳಿಸಿದೆ. ದುರದೃಷ್ಟವಶಾತ್, ಭಾರತೀಯ ಪ್ರಜೆಯೊಬ್ಬರು ಹೃದಯಾಘಾತದಿಂದ ಅರಾಕನ್ ಸೈನ್ಯದ ವಶದಲ್ಲಿದ್ದಾಗ ಮೃತಪಟ್ಟಿದ್ದಾರೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಅವರು ದೀರ್ಘಕಾಲದ ಮಧುಮೇಹ ರೋಗಿಯಾಗಿದ್ದರು ಎಂದು ತಿಳಿದುಬಂದಿದೆ. ಬಿಡುಗಡೆಯಾದ ಭಾರತೀಯ ಪ್ರಜೆಗಳು, ಮೃತರ ಶವದೊಂದಿಗೆ ಸಿಟ್ವೆ ತಲುಪಿದ್ದಾರೆ (ನವೆಂಬರ್ 4 ರಂದು) ಮತ್ತು ಭಾರತಕ್ಕೆ ಮುಂದಿನ ಪ್ರಯಾಣಕ್ಕಾಗಿ ಇಂದು ಯಾಂಗೊನ್ಗೆ ತೆರಳಲಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 