ದೇವರ ಮುಂದಿನ ದೀಪದಿಂದ ಮನೆ ಸಂಪೂರ್ಣ ಭಸ್ಮ

ದೇವರ ಮುಂದಿನ ದೀಪದಿಂದ ಮನೆ ಸಂಪೂರ್ಣ ಭಸ್ಮ The house was completely burnt by the fire next to God

ದೇವರ ಮುಂದಿನ ದೀಪದಿಂದ ಮನೆ ಸಂಪೂರ್ಣ ಭಸ್ಮ 

ಹಾವೇರಿ 11: ತಾಲೂಕಿನ ಅಕ್ಕೂರ ಗ್ರಾಮದ ಕರಬಸಪ್ಪ ಈರ​‍್ಪ ತೋಟಿಗೇರ ಇವರ ಮನೆ ಯಾರು ಇಲ್ಲದ ಸಮಯದಲ್ಲಿ ಮನೆಯಲ್ಲಿ ಇದ್ದ ದೀಪದಿಂದಲೇ ಮನೆಯು ಸಂಪೂರ್ಣವಾಗಿ ಬೆಂಕಿಗೆ ಸುಟ್ಟು ಹೋಗಿರುವ ಘಟನೆ ಜರುಗಿದೆ. ಬೆಳಗಿನ ಜಾವಾ ಮನೆಯಲ್ಲಿ ಪೂಜೆ ಮಾಡಿ ಹೊಲದ ಕೆಲಸಕ್ಕೆ ತಂದೆ-ತಾಯಿ ಹೋಗಿದ್ದರು. 

ಮಕ್ಕಳು ಶಾಲೆಗೆ ಹೋಗಿದ್ದರು.ತಕ್ಷಣವೇ ಸುತ್ತಮುತ್ತಲಿನ ಜನರೆಲ್ಲ ಸೇರಿ ನೀರಿನಿಂದ ಬೆಂಕಿಯನ್ನು ನಂದಿಸಿದರು.ಕಂದಾಯ ಗ್ರಾಮ ಆಡಳಿತಾಧಿಕಾರಿ  ಬಸಯ್ಯ ಮಠಪತಿ ಆಗಮಿಸಿ ಹಾನಿಯ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಹರೀಶ ಮಾಗಡಿಮಠ ಗ್ರಾಮಸ್ಥರಾದ ಮುತ್ತಣ್ಣ ಭರಡಿ,ಯಲ್ಲನಗೌಡ ಮರಿಗೌಡ್ರ,ಮಹಾದೇವಪ್ಪ ಭರಡಿ,ಉಮೇಶ್ ಹೊಸಮನಿ,ಈರಣ್ಣ ತೋಟಿಗೇರ ಮುಂತಾದವರು  ಸರ್ಕಾರದಿಂದ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.