ಕೆಎಲ್ಇ ಶಿವಾಲಯದ 47ನೇ ವಾರ್ಷಿಕೋತ್ಸವ: ಎರಡು ದಿನಗಳ ಯುಗಾದಿ ಕಾರ್ಯಕ್ರಮ
47th Anniversary of KLE Shivalaya: Two-day Ugadi program
ಲೋಕದರ್ಶನ ವರದಿ
ಬೆಳಗಾವಿ 15 : ಕೆಎಲ್ಇ ವಿಶ್ವಾವಿದ್ಯಾಲಯದ ಶಿವಾಲಯ ಸಮಿತಿ ವತಿಯಿಂದ ನಗರದ ಜೆ ಎನ್ ಎಂ ಸಿ ಕ್ಯಾಂಪಸ್ ನಲ್ಲಿರುವ ಶಿವಾಲಯದ 47ನೇ ವಾರ್ಷಿಕೋತ್ಸವ ಮತ್ತು ಯುಗಾದಿ ಕಾರ್ಯಕ್ರಮವನ್ನ ಮಾರ್ಚ್ 18 ಮತ್ತು 19ರಂದು ಎರಡು ದಿನಗಳ ಕಾಲ ಭಕ್ತಿಭಾವದಿಂದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ. ಬುಧವಾರ, ಮಾರ್ಚ್ 18ರಂದು ಸಂಜೆ 5.30ಕ್ಕೆ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಉದ್ಘಾಟನೆ ನಡೆಯಲಿದೆ.
ಈ ಸಂದರ್ಭದಲ್ಲಿ ನಾಗನೂರು ರುದ್ರಾಕ್ಷಿ ಮಠದ ಡಾ. ಮ.ನಿ.ಪ್ರ. ಶ್ರೀ ಅಲ್ಲಮ ಪ್ರಭು ಮಹಾ ಸ್ವಾಮೀಜಿ ಅವರ ಆಶೀರ್ವಚನಗಳೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ನಂತರ ಕೆ ಎಲ್ ಇ ವಿಶ್ವವಿದ್ಯಾಲಯದ ಸಂಗೀತ ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಂದ ಸಂಗೀತರಾಧನೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ನಗರದ ಗಣ್ಯ ನಾಗರಿಕರಿಗೆ, ಕಎಲ್ ಇ ವಿಶ್ವವಿದ್ಯಾಲಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸನ್ಮಾನ ನಡೆಯಲಿವೆ.
ಗುರುವಾರ, ಮಾರ್ಚ್ 19ರಂದು ಬೆಳಗಿನ ಜಾವ ಮಹಾ ರುದ್ರಾಭಿಷೇಕ ವಿವಿಧ ಪೂಜೆಗಳು ನಡೆಯಲಿದ್ದು ಸಂಜೆ 5 ಗಂಟೆಯಿಂದ ವಿಶ್ವವಿದ್ಯಾಲಯದ ಆವರಣದ ಮತ್ತು ಸಿಬ್ಬಂದಿಗಳ ಮಕ್ಕಳಿಂದ ವಿವಿಧ ವೇಷ ಭೂಷಣ ಮತ್ತು ಭಕ್ತಿ ಗೀತೆಗಳು ನಡೆಯಲಿದೆ ನಂತರ ಬೆಳಗಾವಿಯ ವಿಶಾರದಾಯ ನೃತ್ಯ ಶಾಲೆಯ ತಂಡದವರಿಂದ ನೃತ್ಯರಾಧನೆ ರ್ಯಕ್ರಮಗಳು ನಡೆಯಲಿದ್ದು ನಂತರ ಮಹಾ ಆರತಿ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.
ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಶಿವಾಲಲಯ ಅಧ್ಯಕ್ಷರು, ಕಾರ್ಯಧರ್ಶಿಗಳು ತಿಳಿಸಿರುವುದಾಗಿ ಪ್ರಧಾನ ಅರ್ಚಕರಾದ ವೇ. ಶಂಕರಯ್ಯ ಶಾಸ್ತ್ರಿ ಹಿರೇಮಠ ಮನವಿ ಮಾಡಿದ್ದಾರೆ.......
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 