ಶ್ರದ್ಧೆ ಭಕ್ತಿಯಿಂದ ಜರುಗಿದ ಹುಸೇನ-ಹಸನರ ಕತ್ತಲ್ ರಾತ್ರಿ
ಲೋಕದರ್ಶನ ವರದಿ
ಮುದಗಲ್ಲ 10: ಪಟ್ಟಣದ ಕಿಲ್ಲಾದಲ್ಲಿರುವ ಹಜರತ ಹುಸೆನ್ ಪೀರ ಹಾಗೂ ಮೇಗಳಪೇಟೆಯಲ್ಲಿರುವ ಹಜರತ್ ಹಸನ್ ಪೀರಗಳ (ದೇವರು)ಕತ್ತಲ್ ರಾತ್ರಿಯು ಅತ್ಯಂತ ಶ್ರದ್ಧೆ-ಭಕ್ತಿಯೊಂದಿಗೆ ಸೋಮವಾರ ರಾತ್ರಿ ಜರುಗಿತು.
ಮೊಹರಂ ಹಬ್ಬದ ಒಂಭತ್ತನೆ ದಿನದಂದು ಹಜರತ್ ಮೌಲಾಲಿ ಪೀರರ ಮಕ್ಕಳು ಎಂದು ಹೆಳಲಾಗುವ ಹಸನ ಪೀರ ಹಾಗೂ ಹುಸೇನ ಪೀರರ ಕತ್ತಲ ರಾತ್ರಿಯಾದ ಸೋಮುವಾರ ರಾತ್ರಿ ಮೂಲ ದರ್ಗಾದಿಂದ ದೇವರುಗಳನ್ನು ಹೊತ್ತು ನಗಾರಿ ಭಾರಿಸುತ್ತ, ಶಹನಾಯಿ, ತಮಟೆ, ಬಾಜಭಜೆಂತ್ರಿ ಮೇಳದೊಂದಿಗೆ ಮುತ್ಯಾನ ದರ್ಗಾ ಮತ್ತು ಹವಾಲದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಅಲ್ಲದೆ ಕೋಟೆಯ ಹೊರ ಭಾಗದ ಬಾಗಲಕೋಟೆ ರಸ್ತೆಯಲ್ಲಿ ಮೇಗಳಪೇಟೆಯ ಹಜರತ್ ಹಸನ್ ಪೀರ ಸವಾರಿ ಮಾಡಲಾಯಿತು. ಕತ್ತಲ ರಾತ್ರಿಯಂದು ಸೋಮುವಾರ ರಾತ್ರಿ- ಮಂಗಳವಾರ ಬೆಳಗಿನ ಜಾವ ಸಾವಿರಾರು ಭಕ್ತರು ತಾವು ಬೇಡಿಕೊಂಡಿದ್ದ ಹರಕೆ ತೀರಿಸಲು ಕಬ್ಬಿಣದ ತಂತಿಗೆ ಕೊಬ್ಬರಿ ಅಂಟಿಸಿ ಪೀರಗಳ ಮುಂದೆ ಸುಟ್ಟರೆ, ಮತ್ತೆ ಕೆಲವರು ಎಣ್ಣೆ ದೀಪದ ಪಂಜೀನ ಸೇವೆ ಸಲ್ಲಿಸಿದರು. ಹಸನ್-ಹುಸೇನ ಪೀರಾಗಳ ಸವಾರಿಗೆ ಸಾವಿರಾರು ಭಕ್ತರು ಸೇರಿದ್ದರು.
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 