ಅಲೆಮಾರಿ ಸಮುದಾಯದ ಹೋರಾಟಗಾರರ ಮನವಿ
ಲೋಕದರ್ಶನ ವರದಿ
ಬೆಳಗಾವಿ 16: ಅಲೆಮಾರಿ ಜನಾಂಗದ ಎಲ್ಲ ಉಪ ಪಂಗಡಗಳನ್ನು ಪ್ರವರ್ಗ 1 ರಿಂದ ಪರಿಶಿಷ್ಟ ಜಾತಿಗೆ ಸೇರಿಸುವಂತೆ ಆಗ್ರಹಿಸಿ ಅಖಿಲ ಕನರ್ಾಟಕ ಅಲೆಮಾರಿ ಸಮುದಾಯದ ಹೋರಾಟಗಾರರು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಅಲೆಮಾರಿ ಜನಾಂಗದ ಬೈಲಪತರ, ಹೆಳವರ ಮುಂತಾದ ಪಂಗಡಗಳನ್ನು ಈಗ ಪ್ರವರ್ಗ 1 ರಲ್ಲಿ ಸೇರಿಸಿರುವದರಿಂದ ಸೌಲಭ್ಯಗಳಿಂದ ಈ ಸಮಾಜ ವಂಚಿತವಾಗುತ್ತಿದೆ. ಅಲೆಮಾರಿ ಜನಾಂಗವು ಒಂದೆ ಕಡೆ ಇರುವದಿಲ್ಲ. ಚಿಮ್ಮಣಕಿ, ಉಂಗುರ, ಹಾಲಗಡಗಾ, ಕಬ್ಬಿಣ, ತಾಮ್ರ, ಹಿತ್ತಾಳೆಯಿಂದ ಚಿಕ್ಕಪುಟ್ಟ ವಸ್ತುಗಳನ್ನು ಸಿದ್ದ ಪಡಿಸಿಕೊಂಡು ಆಯಾ ಊರುಗಳ ಜಾತ್ರೆ ಮತ್ತು ಹಳ್ಳಿ ಹಳ್ಳಿಗಳಿಗೆ ತಿರುಗುತ್ತಾರೆ. ಇಂತಹ ತೀರ ಹಿಂದುಳಿದ ಸಮುದಾಯವನ್ನು ಪ್ರವರ್ಗ 1 ರಲ್ಲಿ ಸೇರ್ಪಡೆ ಮಾಡಿರುವದು ತುಂಬ ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ.
ಅಲೆಮಾರಿ ಸಮುದಾಯವು ಶೈಕ್ಷಣಿಕವಾಗಿ, ಆಥರ್ಿಕವಾಗಿ, ಸಾಮಾಜಿಕವಾಗಿ ತೀರ ಹಿಂದುಳಿದಿದೆ. ಒಂದೆ ಕಡೆ ನೆಲೆಸಿ ಶಿಕ್ಷಣ ಪಡೆಯುವ ಸೌಲಭ್ಯ ಇಲ್ಲದರಿಂದ ಈ ಸಮುದಾಯದ ಜನರಿಗೆ ಸರಕಾರಿ ನೌಕರಿಗಳು ಇಲ್ಲ. ಹಾಗೂ ಇತರ ಸೌಲಭ್ಯಗಳು ಇಲ್ಲದರಿಂದ ಇಂದಿಗೂ ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಮನವಿ ಸ್ವೀಕರಿಸಿದ ಡಾ. ಈ.ಪರಮೇಶ್ವರ ಅವರು ಮನವಿಯನ್ನು ಪರಿಶೀಲಿಸುವ ಭರವಸೆ ನೀಡಿದರು.
ಹನಮಂತ ಟಿಕೋಳ, ಅಪ್ಪೂಶಾ ಸಂಪ್ಲಿಸಿ, ನಾಗೇಶ ಪಂಚಮಿ, ಪ್ರಲ್ಹಾದ ಸಂಪ್ಲಿಸಿ, ಶಂಕರ ಪಂಚಮಿ ಮುಂತಾದವರು ಉಪಸಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 