ಮುಸ್ಲಿಂ ಸಮುದಾಯಕ್ಕೆ ಜೆಡಿಎಸ್ನಿಂದ ಟೀಕಟ್
ಲೋಕದರ್ಶನ ವರದಿ
ಗಂಗಾವತಿ: ನಗರಸಭೆ ಚುನಾವಣೆಯಲ್ಲಿ 35 ವಾರ್ಡಗಳಿಂದ ಸ್ಪದರ್ಿಸಲು ಮುಸ್ಲಿಂ ಜನಾಂಗದವರಿಗೆ ಜೆಡಿಎಸ್ ನಿಂದ ಪ್ರಥಮ ಆದ್ಯತೆ ನೀಡಲಾಗುವದು ಎಂದು ಜೆಡಿಎಸ್ ಮುಖಂಡ, ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮಾವ ಪಾಡಗುತ್ತಿ ಅಕ್ತರಸಾಬ ತಿಳಿಸಿ ಸಿರುವದು ವಿವಾದಕ್ಕೆ ಕಾರಣವಾಗಿದೆ.
ಸವರ್ೆಶ್ ಹೋಟೆಲ್ ಸಭಾಂಗಣದಲ್ಲಿ ಸೋಮವಾರ ಜೆಡಿಎಸ್ ರಾಜ್ಯ ಉಪಾಧ್ಯಕ್ಷ, ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ನಾಥರ ಅಧ್ಯಕ್ಷತೆಯಲ್ಲಿ ನಗರಸಭೆ ಚುನಾವಣೆ ಕುರಿತು ಹಮ್ಮಿಕೊಂಡಿದ್ದ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಹಿಂದು ಮತ್ತು ಮುಸ್ಲಿಂ ಜನಾಂಗಗಳ ಮಧ್ಯೆ ಬೆಂಕಿ ಇಟ್ಟು ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಅಶಾಂತಿ ಮತ್ತು ಗಲಭೆ ಉಂಟಾಗಲು ಕಾರಣನಾಗಿದ್ದ ಎಂದು ಹೇಳಿದರು. ಜನರು ಭಯದ ವಾತಾವರಣದಿಂದ ಜೀವನ ನಿರ್ವಹಣೆ ಮಾಡುವ ವಾತಾವರಣ ನಿಮರ್ಾಣ ಮಾಡಿ ತಮ್ಮ ಲಿಕ್ಕರ್ ದಂಧೆಯನ್ನು ವಿಸ್ತರಿಸಿಕೊಂಡು ಲಿಕ್ಕರ್ ಮಾಫಿಯಾ ಡಾನ್ ಆಗಿ ಮರೆದು ಇಂದು ಇಕ್ಬಾಲ್ ಚರಂಡಿ ಸೇರಿದ್ದಾರೆ ಎಂದು ಅಕ್ತರ ತಿಳಿಸಿದರು.
ಇಕ್ಬಾಲ್ ಅನ್ಸಾರಿ ತಂದೆ ಎಂಎಸ್ ಅನ್ಸಾರಿ ಜೀವಂತ ಇದ್ದಾಗ ಗಂಗಾವತಿ ಭಾವೈಕ್ಯತೆಯ ನಾಡಾಗಿತ್ತು. ಈ ಭಾಗದ ಧಣಿ ಎಚ್.ಜಿ.ರಾಮುಲು ಅವರ ಆಶೀವರ್ಾದ ದದಿಂದ ರಾಜಕೀಯಕ್ಕೆ ಪ್ರವೇಶಿಸಿದ ಇಕ್ಬಾಲ್ ಸಾಕಿದ ಧಣಿಗೆ ನಾಯಿಯಂತೆ ಕಚ್ಚಲು ಹೋಗಿ ವಿಧಾನಸಭಾ ಚುನಾವಣೆಯಲ್ಲಿ ನಗರಸಭೆ ಕಸದ ಬುಟ್ಟಿ ಸೇರಿದ ಎಂದು ಲೇವಡಿ ಮಾಡಿದರು. ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಮತ್ತು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಇಕ್ಬಾಲ್ ಅನ್ಸಾರಿ ನಗರಸಭೆ ಚುನಾವಣೆ ಯಲ್ಲಿ ಹೊಂದಾಣಿಕೆ ಮಾಡಿಕೊಂಡಿರುವ ಮಾಹಿತಿ ಬಂದಿದೆ.
ಈ ಎರಡೂ ಪಕ್ಷಗಳನ್ನು ಮತ್ತು ಮುಖಂಡರನ್ನು ಚುನಾವಣೆ ಯಲ್ಲಿ ಮೂಲೆ ಗುಂಪು ಮಾಡುವ ಅವಶ್ಯಕತೆ ಇದೆ. ಒಂದು ವೇಳೆ ಜೆಡಿಎಸ್ ಪಕ್ಷದಿಂದ ಸ್ಪದರ್ಿಸುವ ಆಕಾಂಕ್ಷಿಗಳಿಗೆ ಟಿಕೇಟ್ ಸಿಗದಿದ್ದರೆ ನೇರವಾಗಿ ತಮ್ಮ ಪಕ್ಷದ ಉಪಾಧ್ಯಕ್ಷ ಎಚ್.ಆರ್. ನಾಥಧಣಿಯವರನ್ನು ಸಂಪಕರ್ಿಸಬೇಕು ಎಂದು ಹೇಳಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಆರ್. ಶ್ರೀನಾಥ, ಜಿಲ್ಲಾ ಅಧ್ಯಕ್ಷ ಅಮರೇಶ ಮಾಲೀಪಾಟೀಲ್, ನಗರ ಘಟಕದ ಅಧ್ಯಕ್ಷ ಶೇಖನಬಿಸಾಬ, ವಿಧಾನಸಭಾ ಕ್ಷೇತ್ರದ ಅಧ್ಯಕ್ಷ, ಮಾಜಿ ಶಾಸಕ ಗವಳಿ ಮಹಾದೇವಪ್ಪನವರ ಪುತ್ರ ಗವಳಿ ರಮೇಶ ಸಭೆಯಲ್ಲಿ ಮಾತನಾಡಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 