ಮಂತ್ರಾಲಯ ಪಾದಯಾತ್ರಿಗಳೊಂದಿಗೆ ಕಿರುತೆರೆ ಕಲಾವಿದರು
Television artistes with Mantralaya Padayatris
ಮಹಾಲಿಂಗಪುರ 17: ಕಳೆದ 4ಂ ವರ್ಷಗಳಿಂದ ಮಂತ್ರಾಲಯ ಪಾದಯಾತ್ರೆ ಕೈಗೊಳ್ಳುತ್ತಿರುವ ಮಹಾಲಿಂಗಪುರದ ರಾಯರ ಭಕ್ತರು ಈ ಬಾರಿ ವಿಶೇಷ ಅನುಭವದೊಂದಿಗೆ 7 ದಿನಗಳಿಂದ ಪಾದಯಾತ್ರೆ ಬೆಳೆಸಿದ್ದಾರೆ.
ಪಾದಯಾತ್ರಿಗಳ ಬಾಲ್ಯದ ಗೆಳೆಯ ಕಿರುತೆರೆ ಹಾಸ್ಯ ಕಲಾವಿದ ಮಹಾಲಿಂಗಪುರದ ದಾನಪ್ಪ ಮೂಡಲಗಿ ಹಾಗೂ ಮಾ.ಆನಂದ ಕೂಡ ಪಾದಯಾತ್ರೆ ಬೆಳೆಸಿದ್ದು ವಿಶೇಷ. ವಿದ್ಯಾರ್ಥಿದೆಸೆಯಿಂದಲೂ ಮಂತ್ರಾಲಯ ಪಾದಯಾತ್ರೆ ಮಾಡುತ್ತಿದ್ದ ದಾನಪ್ಪ ಮೂಡಲಗಿ ಕಲಾವಿದರಾಗಿ ಬೆಂಗಳೂರು ಸೇರಿದ್ದರೂ ಪ್ರತಿ ವರ್ಷ ತವರೂರಿನಿಂದ ಪಾದಯಾತ್ರೆ ಕೈಗೊಳ್ಳುತ್ತಾರೆ. ಈ ವರ್ಷ ದಾನಪ್ಪನ ಜೊತೆ ಮಾ.ಆನಂದ ಕೂಡ ಮಹಾಲಿಂಗಪುರಕ್ಕೆ ಬಂದು ಮಹಾಲಿಂಗೇಶ್ವರ ದೇವಸ್ಥಾನದಿಂದ ಎಲ್ಲ ಭಕ್ತರೊಂದಿಗೆ ಪಾದಯಾತ್ರೆ ಬೆಳೆಸಿದ್ದಾರೆ. ಮಂಗಳವಾರ ಜ.15ರಂದು ಮಂತ್ರಾಲಯ ತಲುಪಲಿದ್ದಾರೆ.
ಪಾದಯಾತ್ರೆಯಲ್ಲಿ ರವಿ ತಟ್ಟಿಮನಿ, ಕೃಷ್ಣಗೌಡ ಪಾಟೀಲ, ವಿಷ್ಣುಗೌಡ ಪಾಟೀಲ, ವಿನೋದ (ಪಪ್ಪು) ಹುರಕಡ್ಲಿ, ಚನ್ನಪ್ಪ ಹುನ್ನೂರ, ರಾಜು ತಾಳಿಕೋಟಿ, ಮಲ್ಲಪ್ಪ ಯರಡ್ಡಿ, ರಾಜು ಕೋಳಿಗುಡ್ಡ, ಸಂಜಯ ತಾಳಿಕೋಟಿ ಹಾಗೂ ಬೆಂಗಳೂರಿನಿಂದ ದಾನಪ್ಪ ಮೂಡಲಗಿ ಗೆಳೆಯ ಮಾ.ಆನಂದ ರಾಯರ ಭಕ್ತರಾಗಿ ಗೆಳೆಯರೊಂದಿಗೆ ಹೆಜ್ಜೆ ಹಾಕಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 