ತಮಿಳುನಾಡು : ಮಾವುತನನ್ನು ಕೊಂದ ದೇವಾಲಯದ ಆನೆ
ಮಧುರೈ, ಮೇ 25, ಮಧುರೈ ಜಿಲ್ಲೆಯ ಪ್ರಸಿದ್ಧ ಭಗವಾನ್ ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಸೇರಿದ ಹೆಣ್ಣು ಆನೆ ದೈವಾನಿ ತನ್ನ ಮಾವುತನನ್ನು ತುಳಿದು ಕೊಂದಿರುವ ದುರಂತ ಘಟನೆ ಜರುಗಿದೆ.ಭಾನುವಾರ ರಾತ್ರಿ ಮಾವುತ ಕಾಲಿಮುತ್ತು 14 ವರ್ಷ ವಯಸ್ಸಿನ ಹೆಣ್ಣಾನೆಯನ್ನು ಸ್ನಾನಕ್ಕೆ ಕರೆದೊಯ್ಯುವಾಗ ಈ ಘಟನೆ ನಡೆದಿದೆ. ಆನೆ ತನ್ನ ಸೊಂಡಿಲಿನಿಂದ ಕಾಲಿಮುತ್ತುವನ್ನು ಎಸೆದು ಮುಂಭಾಗದ ಕಾಲಿನಿಂದ ಮೆಟ್ಟಿತು ಎನ್ನಲಾಗಿದೆ.
ತೀವ್ರವಾಗಿ ಗಾಯಗೊಂಡ ಮಾವುತನನ್ನು ಸರ್ಕಾರಿ ರಾಜಾಜಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿ ಅವರು ಸಾವನ್ನಪ್ಪಿದ್ದಾರೆ. ಆನೆ, ಮಾವುತನ ಮೇಲೆ ದಾಳಿ ಮಾಡಿದ ನಂತರ, ದೇವಾಲಯದ ಒಳಗಿದ್ದ ಜನರು ತೀವ್ರ ಭೀತಿಗೊಳಗಾಗಿದ್ದು, ಈ ವೇಳೆ ಅಲ್ಲಿಗೆ ಬಂದ ಮತ್ತೊಬ್ಬ ಮಾವುತ, ಆನೆಯ ಮೇಲೆ ನೀರು ಸಿಂಪಡಿಸಿದ ನಂತರ ಅದು ಶಾಂತವಾಗಿದೆ.ದೈವಾನಿ ಏಳು ವರ್ಷದವಳಿದ್ದಾಗ ಅಸ್ಸಾಂನಿಂದ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕರೆತರಲಾಯಿತು. ಇದು ಮಾರ್ಚ್ 2018 ರಲ್ಲಿಯೂ ತನ್ನ ಮಾವುತರ ಮೇಲೆ ದಾಳಿ ಮಾಡಿದ ಇತಿಹಾಸವನ್ನು ಹೊಂದಿದೆ. ಇದು ಗಣಪತಿ ಸುಬ್ರಮಣಿಯನ್ ಮತ್ತು ಕನಗಸುಂದರಂ ಹೆಸರಿನ ಮಾವುತರ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ಕೆಲವು ತಿಂಗಳುಗಳ ನಂತರ, ಆನೆ ಮತ್ತೆ ಮತ್ತೊಬ್ಬ ಮಾವುತನ ಮೇಲೆ ದಾಳಿ ಮಾಡಿತಾದರೂ, ಅವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ 