ವಿದ್ಯಾರ್ಥಿಗಳ ಬಿಳ್ಕೊಡುಗೆ ಪ್ರತಿಭಾ ಪುರಸ್ಕಾರ ಹಾಗೂ 6 ನೇ ವಾರ್ಷಿಕೋತ್ಸವ ಸಮಾರಂಭ

ವಿದ್ಯಾರ್ಥಿಗಳ ಬಿಳ್ಕೊಡುಗೆ ಪ್ರತಿಭಾ ಪುರಸ್ಕಾರ ಹಾಗೂ 6 ನೇ ವಾರ್ಷಿಕೋತ್ಸವ ಸಮಾರಂಭ  Student Talent Award and 6th Anniversary Ceremony

ಕೊಲ್ಹಾರ 11 : ದೇವರು  ಭೂಮಿಗೆ ಕಳ್ಸಿವಾಗ ಎಲ್ಲಾ ಮಕ್ಕಳ ಹಣೆಯ ಮೇಲೆ ಸ್ವಚ್ಚಂದವಾದ ಪಾಠಿಯನ್ನೆ ಇಟ್ಟು ಕಳ್ಸಿಸಿರುತ್ತಾನೆ  ಎಂದು ಸಾಹಿತಿ ಅಶೋಕ ಹಂಚಲಿ ಹೇಳಿದರು. ಪಟ್ಟಣದಲ್ಲಿ ಮಂಗಳವಾರ ವಿದ್ಯಾಸ್ಪೂರ್ತಿ ಪೂರ್ವ ಪ್ರಾಥಮಿಕ ಶಾಲೆ ಹಾಗೂ ನವೋದಯ ಕೋಚಿಂಗ ಕ್ಲಾಸಿಸನ 5 ನೇ ತರಗತಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಪ್ರತಿಭಾ ಪುರಸ್ಕಾರ ಹಾಗೂ 6 ನೇ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ಪಾಲಕರು  ನೀವು ನಿಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲಗೋಳಿಸಿ  ಬರೆಯುವಾಗ ಸುಂದರವಾಗಿ ಬರೆದ್ರೆ ಅವನ ಭವಿಷ್ಯ ಅದ್ಭುತವಾಗಿರುತ್ತದೆ.

ಆದರೆ ನೀವು ಅವನಿಗೆ ಸರಿಯಾದ  ಸಮಯ ಸಂಸ್ಕಾರವನ್ನು  ಮಗುವಿಗೆ ಕೊಡದೆ ಹೊದರೆ  ಆ ಮಗು ಮೊಬೈಲ್ ಚಾಟಿಂಗ್ ಮಾಡುತ್ತಾ ಟಿವಿಯಲ್ಲಿ ಮುಳಗಿ ಹಾಳಾಗಿ ಹೋಗಿ ಬೀಡುತ್ತಾರೆ  ವಿನಃ ಆದರ್ಶ್‌ ವ್ಯಕ್ತಿಗಳಾಗಲು ಸಾಧ್ಯವಿಲ್ಲಾ  ನಾವು ಭೂಮಿಗೆ ಬಿತ್ತುವಾಗ ಬೇವಿನ ಬೀಜ  ಭೀತ್ತಿ ಮಾವಿನ ಹಣ್ಣು ಬೇಕು ದೇವರೆ ಎಂದರೆ ಅದು ನಮಗೆ ಸಿಗುವುದಿಲ.್ಲ  ಆದ್ದರಿಂದ ಸಂಸ್ಕಾರ ಶಿಕ್ಷಣ ಮಕ್ಕಳಿಗೆ  ನೀಡಿದ್ದೆ ಆದರೆ ಒಳ್ಳೆಯ ಸಂಸ್ಕಾರವಂತ ಮಕ್ಕಳು ರೇಡಿ ಆಗುತ್ತಾರೆ ಎಂದು ಹೇಳಿದರು ಬಳಿಕ ಸಂತಕವಿ ಕಾಳಿದಾಸ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಹೊನ್ನೇಶ ಮುರಗೊಡ ಮಾತನಾಡಿ  ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಭವಿಷ್ಯ  ಉಜ್ವಲವಾಗಲಿ ಶಿಕ್ಷಣ ನಿಂತ ನೀರಾಗದೆ ಹರಿಯುವಂತಾಗಬೇಕು.

ಯಾಕೆಂದರೆ ಇವತ್ತು ಜಗತ್ತು ಬಹಳ ಮುಂದುವರೆದಿದೆ ನಮ್ಮ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕ ಹಾಗೂ ತಾಯಂದಿರ ಪಾತ್ರ ಮಹತ್ವದ್ದು ಶಿಕ್ಷಕ ಬಾಲಕ ಪಾಲಕ ಈ ಮೂರು ರತ್ನಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದರೆ  ಶಿಕ್ಷಣ ಯಶಸ್ವಿಯಾಗುತ್ತವೆ ಅದಕ್ಕಾಗಿ ನಾವು ನೀವು ಎಲ್ಲರೂ ಆ ಉಜ್ವಲ ಭವಿಷ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ದಾಪುಗಾಲು ಇಡುತ್ತಿದೆ ಎಂದರು ಕಾರ್ಯಕ್ರಮದ ದಿವ್ಯ ಸಾನಿದ್ಯ ಪೂಜ್ಯ ಶ್ರೀ ಯೋಗಿ ಕಲ್ಲಿನಾಥ ದೇವರು, ಶರಣಗೌಡ ಗೌಡರ ,ರಾಜಶೇಖರ ಲಮಾಣಿ ,ಪರಸುರಾಮ ಜಿ. ಕೊಳಮಲಿ ,ರಾಘವೇಂದ್ರ ಬಡಿಗೇರ,ಯಮನೂರಿ ಮಾಕಾಳಿ,ಕಲ್ಲಪ್ಪ ಕಾಖಂಡಕಿ, ಜಿ. ಆಯ್‌. ಗೋಡಿಹಾಳ,ಬಾಬುರಾವ ಬೆಳ್ಳುಬ್ಬಿ ಇತರರು ಉಪಸ್ಥಿತರಿದ್ದರು