ಕ್ರೀಡೆಗಳು ಆರೋಗ್ಯಕ್ಕೆ ವರದಾನ: ಆರ್ ಟಿ ಪಾಟೀಲ
Sports boon for health: RT Patil
ರನ್ನ ಬೆಳಗಲಿ 6: ಪಟ್ಟಣದ ಸಮೀಪದ ಗ್ರಾಮ ನಾಗರಾಳ ಮಾಧವಾನಂದ ಕನ್ನಡ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರದಂದು ಸನ್ 2024-25ನೇ ಸಾಲಿನ ಶಾಲಾ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ ಸಮಾರಂಭ ಜರಗಿತು.
ಸಂಸ್ಥೆಯ ಅಧ್ಯಕ್ಷ ಆರ್ ಟಿ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಅವರು ಕ್ರೀಡೆಗಳು ಆರೋಗ್ಯಕ್ಕೆ ವರದಾನವಾಗಿವೆ ದಿನನಿತ್ಯದ ಪಠ್ಯ ಪುಸ್ತಕಗಳ ಅಭ್ಯಾಸಗಳ ಜೊತೆಗೆ ಆಟೋಟಗಲಿ ಭಾಗವಹಿಸಿ ಮೊಬೈಲ್ ನಿಂದ ದೂರ ಇರಬೇಕೆಂದು ತಿಳಿಸಿದರು.ಸಂಸ್ಥೆಯ ಉಪಾಧ್ಯಕ್ಷ ವೆಂಕಪ್ಪ ಬಿ ಪಾಟೀಲ ಸಂಸ್ಥೆಯ ಕಾರ್ಯದರ್ಶಿ ಆಯ್ ಅರ ಗಂಜಿ ಊರಿನ ಪ್ರಮುಖರಾದ ದುಂಡಪ್ಪ ಜೈನಾಪುರ, ಯಲ್ಲಪ್ಪ ಚನ್ನಾಪುರ, ಭೀಮಶಿ ನೇಗಿ, ಮಾನಿಂಗ ಭಜಂತ್ರಿ, ಸಿದ್ದಲಿಂಗಪ್ಪ ಪಾಟೀಲ, ಹರೀಶಗೌಡ ಪಾಟೀಲ, ಸಂಸ್ಥೆಯ ಮುಖ್ಯ ಗುರು ಅಶೋಕ್ ಯಡಹಳ್ಳಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ನಿರೂಪಣೆಯನ್ನು ಕೃಷ್ಣಾ ಹೊಸಮನಿ, ಕ್ರೀಡಾ ಜ್ಯೋತಿ ಕಾರ್ಯಕ್ರಮ ಗೋವಿಂದ ಹಾದಿಮನಿ ಮತ್ತು ವಂದನಾರೆ್ಣಯನ್ನು ರಾಚಪ್ಪ ಮಾದರ, ಪ್ರತಿಜ್ಞಾವಿಧಿಯನ್ನು ಗದಿಗೆಪ್ಪ ನೇಸೂರ ಬೋಧಿಸಿದರು.
ಕ್ರೀಡಾಕೂಟದ ಉಸ್ತುವಾರಿಯನ್ನು ದೈ ಶಿ. ಮಲ್ಲಪ್ಪ ಹಸಬಿ ಮತ್ತು ವಿನೋದ ಕಾಂಬ್ಳೆ ವಹಿಸಿದ್ದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 