ಹೊಳಲಮ್ಮದೇವಿಗೆ ಕಾರ್ತಿಕಮಾಸದ ಕೊನೆ ಮಂಗಳವಾರ ವಿಶೇಷ ಕಾರ್ತಿಕೋತ್ಸವ
Special Kartikotsava for Holalammadevi on the last Tuesday of Kartikamasa
ಶಿರಹಟ್ಟಿ 02: ತಾಲೂಕಿನ ಶ್ರೀಮಂತಗಡದ ಆದಿಶಕ್ತಿ ಶ್ರೀ ಹೊಳಲಮ್ಮದೇವಿಗೆ ಕಾರ್ತಿಕಮಾಸದ ಕೊನೆ ಮಂಗಳವಾರದಂದು ಕಮೀಟಿಯ ಸದಸ್ಯರಿಂದ ಕಾರ್ತಿಕೋತ್ಸವವನ್ನು ಆಚರಿಸಲಾಗುತ್ತಿದ್ದು, ದಿ.3 ಮಂಗಳವಾರವಾದ ಬೆಳಿಗ್ಗೆ6 ಗಂಟೆಗೆ ವಿಶೇಷವಾದ ಅಭಿಷೇಕ ಮತ್ತು ಪೂಜೆಯನ್ನು ಕೈಗೊಳ್ಳಲಾಗುವುದು ಮತ್ತು ಸಾಯಂಕಾಲ 7 ಗಂಟೆಗೆ ದೇವಸ್ಥಾನದ ಬಳಿ ದೀಪ ಹಚ್ಚುವ ಕಾರ್ಯಕ್ರಮ ಜರುಗುವುದು. ನಂತರ ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ನಂತರ ಮಹಾ ಪ್ರಸಾದ ಜರುಗುವುದು.ಆದ್ದರಿಂದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಕಮೀಟಿಯ ಅಧ್ಯಕ್ಷ ದಾಮೋಜಿ ತೆಗ್ಗಿಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶೇಷ ಸೂಚನೆ: -ಶ್ರೀಮಂತಗಡದ ಹೊಳಲಮ್ಮದೇವಿಯ ಗರ್ಭಗುಡಿ ಸಿಥಿಲವಾಗಿದ್ದರಿಂದ ಪ್ರಾಚ್ಯವಸ್ತು ಇಲಾಖೆಯವರು ಅಭಿವೃದ್ದಿ ಕಾರ್ಯ ಕಾರ್ಯಕೈಗೊಳ್ಳಲಿದ್ದು, ಗರ್ಭ ಗುಡಿಯನ್ನು ಬುದವಾರದಿಂದ ದೇವಿ ಮೂರ್ತಿಯನ್ನು ನವದಾನ್ಯಗಳಿಂದ ಬರ್ತಿಮಾಡಿ ಗರ್ಬಗುಡಿ ನೂತನವಾಗುವವರೆಗೂ ಮೂರ್ತಿಯ ದರ್ಶನಭಾಗ್ಯವಿರುವುದಿಲ್ಲ.ಆದ್ದರಿಂದ ಕಾರ್ತಿಕ ಮಾಸದ ಕೊನೆಯ ಮಂಗಳವಾರದಂದ ಶ್ರೀ ಹೊಳಲಮ್ಮದೇವಿ ದರ್ಶನ ಪಡೆದು ಪುನಿತರಾಗಬೇಕೆಂದು ವಿನಂತಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 