ಕೆಂಗೇರಿಮಡ್ಡಿ ಕೆಲ ನಿವಾಸಿಗಳು ದಯಾಮರಣ ಕೋರಿ ಮುಖ್ಯಮಂತ್ರಿಗೆ ಪತ್ರ
Some residents of Kengerimaddi have written to the Chief Minister seeking euthanasia
ಮಹಾಲಿಂಗಪುರ 13: ನಗರದ ಪುರಸಭೆ ವ್ಯಾಪ್ತಿಯ ಕೆಂಗೇರಿಮಡ್ಡಿಯ ಸಾಯಿ ಮಂದಿರದ ಹಿಂದುಗಡೆ ಕೆರೆ ಹತ್ತಿರ ಪುರಸಭೆಯ ಸರ್ವೇ ನಂ.29/1ರ 3 ಎಕರೆ 6 ಗುಂಟೆ ಜಾಗದಲ್ಲಿ ವಾಸಿಸುವ ಕೆಲ ನಿವಾಸಿಗಳು ದಯಾಮರಣ ಕೋರಿ ಮುಖ್ಯಮಂತ್ರಿಗೆ ಗುರುವಾರ ಪತ್ರ ಬರೆದಿದ್ದಾರೆ.
'ಈ ಖಾಲಿ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡು ಅಂದಾಜು 20 ವರ್ಷಗಳಿಂದ ಕುಟುಂಬ ಸಮೇತ ವಾಸಿಸುತ್ತಿದ್ದೇವೆ. ಕೂಲಿ ಮಾಡಿ ಜೀವನ ನಡೆಸುತ್ತಿದ್ದೇವೆ. ಸಾಲ ಮಾಡಿ ಶೆಡ್ ನಿರ್ಮಿಸಿಕೊಂಡಿದ್ದೇವೆ. ಆದರೆ, ಈಗ ಇದ್ದಕ್ಕಿದ್ದಂತೆ ಸರ್ಕಾರದ ಜಾಗವೆಂದು ತಮ್ಮನ್ನು ತೆರವುಗೊಳಿಸಲು ಸಿದ್ಧತೆ ನಡೆದಿದೆ. ಜಾಗ ತೆರವುಗೊಳಿಸುವಂತೆ ಈಗಾಗಲೇ ಪುರಸಭೆ ಮುಖ್ಯಾಧಿಕಾರಿ ಸೂಚಿಸಿದ್ದಾರೆ' ಎಂದು ನಿವಾಸಿಗಳು ಪತ್ರದಲ್ಲಿ ತಿಳಿಸಿದ್ದಾರೆ.
ಈ ಜಾಗದಿಂದ ಯಾವಾಗ ಹೊರಹಾಕುತ್ತಾರೆ ಎಂಬ ಆತಂಕದಲ್ಲೇ ಜೀವನ ಸಾಗಿಸುತ್ತಿದ್ದೇವೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ತಮಗೆ ಇಲ್ಲಿಂದ ಹೊರಹಾಕಿದರೆ ಅಕ್ಷರಶಃ ಬೀದಿಪಾಲಾಗುತ್ತೇವೆ. ಸಾವೇ ಗತಿಯಾಗುತ್ತದೆ. ಆದ್ದರಿಂದ ಈ ಜಾಗದಿಂದ ತೆರವು ಮಾಡದಂತೆ ತಡೆದು ತಮ್ಮನ್ನು ಕಾಪಾಡಬೇಕು. ಇಲ್ಲದಿದ್ದರೆ ದಯಾಮರಣ ನೀಡಬೇಕು ಎಂದು ಅವರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಆರ್.ಬಿ.ಚಿಚಖಂಡಿ, ಎಫ್.ಎಂ.ನದಾಫ್, ಸಿ.ವಿ.ಹುಣಶ್ಯಾಳ, ಎಚ್.ಆರ್.ಪೆಂಡಾರಿ, ಭಾರತಿ ಜಯನ್ನವರ, ವಿಜಯ ಜಯನ್ನವರ, ಮಮತಾಜ ನದಾಫ್, ಮಲ್ಲಿಕಾರ್ಜುನ ಬೀಳಗಿ, ರೂಪಾ ಮೋಪಗಾರ, ಎಚ್.ಆರ್.ಬಂಡಿವಡ್ಡರ, ಐ.ಎಸ್.ನದಾಫ,ಲಕ್ಷ್ಮಿ ಬಡಿಗೇರ, ನೇತ್ರಾವತಿ ಬೀಳಗಿ, ಎಸ್.ಆರ್.ಕಂಪು, ಅಪಸನಾ ನದಾಫ ಇತರರು ಪತ್ರಕ್ಕೆ ಸಹಿ ಹಾಕಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 