ಶಿವಳ್ಳಿ ಅಗಲಿಕೆ ಅನಾಥ ಪ್ರಜ್ಞೆ ಮೂಡಿಸಿದೆ: ಪ್ರೊ ಸನದಿ
ಹುಬ್ಬಳ್ಳಿ23: ಅಸಹಾಯಕರ ಆಸರೆ, ದೀನ ದಲಿತರ ಬಂಧು ಸಿ.ಎಸ್. ಶಿವಳ್ಳಿಯವರ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ಹಾನಿಯಾಗಿದೆ. ಅವರ ಅಕಾಲಿಕ ಅಗಲಿಕೆ ಅವರ ಸ್ನೆಹಿತರಿಗೆ, ಬೆಂಬಲಿಗರಲ್ಲಿ ಒಂದು ರೀತಿಯ ಅನಾಥ ಪ್ರಜ್ಙೆ ಮೂಡಿಸಿದೆ, ಎಂದು ಮಾಜಿ ಸಂಸದ ಪ್ರೊ ಐ. ಜಿ. ಸನದಿ ತಿಳಿಸಿದ್ದಾರೆ.
ಇಂದಿಲ್ಲಿ ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಅವರು, ದಶಕಗಳ ಕಾಲ ತಮಗೆ ಆತ್ಮೀಯ ಸ್ನೆಹಿತರಾಗಿದ್ದ ಶಿವಳ್ಳಿ, ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಲು ಶ್ರಮಿಸಿದ್ದರು. ಯಥಾರ್ಥ ವ್ಯೆಕ್ತಿತ್ವದ ಅವರು, ಸಹಾಯ ಕೇಳಿ ಬಂದ ಯಾರನ್ನೂ ನಿರಾಸೆಗೊಳಸಿತ್ತಿರಲಿಲ್ಲ. ಅದೇ ಅವರನ್ನು ಜನಪ್ರಿಯ ರಾಜಕಾರಣಿಯನ್ನಾಗಿ ಬೆಳೆಯಲು, 'ಬಡವರ ಬಂಧು' ಎನ್ನುವ ವಿಶೇಷಣ ಗಳಿಸಲು ಕಾರಣವಾಗಿತ್ತು, ಎಂದು ಪ್ರೊ ಸನದಿ ನುಡಿದಿದ್ದಾರೆ.
ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ, ಹಾಗು ಬೆಂಬಲಿಗರಿಗೆ ಆ ದೇವರು ನೀಡಲಿಯೆಂದು ಪ್ರಾಥರ್ಿಸುತ್ತೇನೆ ಎಂದು ಅವರು ನುಡಿದಿದ್ದಾರೆ.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 