ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ
ಲೋಕದರ್ಶನ ವರದಿ
ಮುಂಡಗೋಡ 16: ಅಪ್ರಾಪ್ತೆಯನ್ನು ಲೈಂಗಿಕವಾಗಿ ಬಳಸಿಕೊಂಡು ಮದುವೆ ಯಾಗುವುದಾಗಿ ಪ್ರಮಾಣಮಾಡಿ ತಲೆ ಮರೆಸಿಕೊಂಡಿದ್ದ ನಿಜವಾದ ಆರೋಪಿ ಮಂಜುನಾಥ ತಳವಾರ ಗುರುವಾರ ಮುಂಡಗೋಡ ಪೊಲೀಸರು ಬಂದಿಸಿದ್ದಾರೆ
ಅಪ್ರಾಪ್ತೆಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಬಗ್ಗೆ ನವಂಬರ 2ರಂದು ಪೊಲೀಸ್ ಠಾಣೆಯಲ್ಲಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ನವಂಬರ 2ರಂದು ಪೊಲೀಸ್ ಠಾಣೆಯಲ್ಲಿ ಮಳಗಿ ಗ್ರಾಮದ ಸಂತೋಷ ಹುಲ್ಲೂರ(23) ಎಂಬ ಯುವಕನ ವಿರುದ್ಧ ಸಂತ್ರಸ್ತೆಯ ತಾಯಿ ದೂರು ದಾಖಲಿಸಿದ್ದರು.
ಆಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡು ಯಲ್ಲಾಪುರ ಸಿ.ಪಿ.ಐ. ಡಾ.ಮಂಜುನಾಥ ನಾಯ್ಕ ಮತ್ತು ಇಲ್ಲಿನ ಪ್ರಭಾರ ಪಿಎಸ್ಆಯ್ ಚಂದ್ರಶೇಖರ ಹರಿಹರ ಸಂತೋಷ ಹುಲ್ಲೂರನ ವಿಚಾರಣೆಗೊಳಪಡಿಸಿದಾಗ ಇವನು ಈ ಕೃತ್ಯ ಮಾಡಿರಲಿಕ್ಕಿಲ್ಲಾ ಎಂಬ ಅನುಮಾನ ಮೂಡಿ ಬಂದಿದೆ.
ಸಂಶಯದ ಸುಳಿಯನ್ನು ಬೆನ್ನುಹತ್ತಿದ ಪೊಲೀಸರು ಬೇರೊಬ್ಬನ ಕೈವಾಡವಿರುವ ಬಗ್ಗೆ ಕೆಲ ಗ್ರಾಮಸ್ಥ ರಿಂದ ತಿಳಿದು ಬಂದು ಮಳಗಿ ಗ್ರಾಮದ ವಿವಾಹಿತ ಮಂಜುನಾಥ ತಳವಾರ(22)ನ ಈ ಕೃತ್ಯವನ್ನು ಮಾಡಿದ್ದಾನೆಂದು ಖಾತ್ರಿಪಡಿಸಿಕೊಂಡು ಈತನನ್ನು ವಿಚಾರಣೆಗೆ ಒಳಪಡಿಸಿದಾಗ ಮತ್ತು ಸಂತ್ರಸ್ತೆಯೂ ಮಂಜುನಾಥನ ಹೆಸರನ್ನು ಒಪ್ಪಿಕೊಂಡಾಗ ಪ್ರಕರಣಕ್ಕೆ ಅಂತಿಮ ತೆರೆ ಎಳೆದಂತಾಯಿತು.
ಆರೋಪಿ ಮಂಜುನಾಥ ತಳವಾರನನ್ನು ಗುರುವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 