ಕಬಡ್ಡಿ , ರಿಲೆ ತಾಲೂಕು ಮಟ್ಟಕ್ಕೆ ಆಯ್ಕೆ
Selection for Kabaddi, Riley Taluk level
ಹನಮಸಾಗರ 13: ಪಾಠದ ಜೊತೆಗೆ ಕ್ರೀಡೆ ಯು ಅಷ್ಟೇ ಮುಖ್ಯ ವಿದ್ಯಾರ್ಥಿಗಳಿಗೆ ಎಂದು ಶಾಲೆಯ ಪ್ರಾಂಶುಪಾಲರಾದ ಶ್ರೀ ಅನಿಲ ಸಂಗಮ, ಹೇಳಿದರು ಮನ್ನೇರಾಳ ಗ್ರಾಮದಲ್ಲಿ ನಡೆದ 2024-25 ನೇ ಸಾಲಿನ ಹನಮಸಾಗರ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟದಲ್ಲಿ ಸ್ಥಳೀಯ ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳು ಗುಂಪು ಆಟಗಳಾದ ಕಬಡ್ಡಿ ಹಾಗೂ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಯಕ್ತಿಕ ವಿಭಾಗದಲ್ಲಿ ಶಿವರಾಜ ಪರಸಾಪೂರ 800ಮೀ ಓಟ ಪ್ರಥಮ,ಪ್ರದೀಪ ಮಾಲಿಪಾಟೀಲ 1500ಮೀ ಓಟ ಪ್ರಥಮ, ಆಕಾಶ ತಳವಾರ 3000 ಮೀ ಪ್ರಥಮ, ಮಂಜುನಾಥ ರಗಣಿ ಡಿಸ್ಕಸ್ ಥ್ರೋ ಪ್ರಥಮ ಹಾಗೂ ಜಾವೆಲಿನ ಥ್ರೋ ದ್ವಿತೀಯ, ಕಿರಣ ಪಾಟೀಲ 400ಮೀ ಓಟ ದ್ವಿತೀಯ, ವರುಣ ಕುದರಿ ಶಾಟ್ ಪುಟ್ ದ್ವಿತೀಯ ಸ್ಥಾನ ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದು, ಪವನ ಹೊಸಮನಿ 100ಮೀ ಓಟ ಹಾಗೂ ಡಿಸ್ಕಸ್ ಥ್ರೋ ತೃತೀಯ, ಜ್ಯೋತಿ ಮೂಡದಿನ್ನಿ ಡಿಸ್ಕಸ್ ಥ್ರೋ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಈ ಎಲ್ಲ ವಿದ್ಯಾರ್ಥಿಗಳಿಗೆ ಶಾಲೆಯ ಪ್ರಾಂಶುಪಾಲರಾದ ಶ್ರೀ ಅನಿಲ ಸಂಗಮ, ನಿಲಯ ಪಾಲಕರಾದ ಪ್ರಭಾಕರ ಮುದಗಲ್ಲ, ದೈಹಿಕ ಶಿಕ್ಷಣ ಶಿಕ್ಷಕಿಯರಾದ ಶ್ರೀಮತಿ ಸುಧಾ ಗೌಡರ, ಶಿಕ್ಷಕರಾದ ಈಶ್ವರ ಪತ್ತಾರ, ಶರಣಪ್ಪ ಪಟ್ಟಣಶೆಟ್ಟಿ, ಸತೀಶ ಅರಕೇರಿ, ಕಮಲಾಕ್ಷಿ ತೆಗ್ಗಿ (ಕಂಪ್ಲಿ), ಕವಿತಾ ಬೆನಕನವಾರಿ, ಬಸಪ್ಪ ಚೌಡಾಪೂರ, ಮಹಾಂತೇಶ ಬೀಳಗಿ ಅಂಬರೀಶ್ ಭೋವಿ, ಅಕ್ಷತಾ ಹುನ್ನಳ್ಳಿ, ಮಂಜುಳಾ ಯಂಗಾಡಿ, ಮೈಲಾರಲಿಂಗಪ್ಪ ಕರಪಡಿ, ಮುತ್ತು ಅಗಸಿಮುಂದಿನ ಹಾಗೂ ಅಡುಗೆ ಸಿಬ್ಬಂದಿಯವರು ಅಭಿನಂದಿಸಿ ಶುಭ ಹಾರೈಸಿದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 