ಅದ್ದೂರಿಯಾಗಿ ಸತ್ತಿಗೇರಿ ರಾಮಲಿಂಗೇಶ್ವರ ಜಾತ್ರೆ

ಯರಗಟ್ಟಿ 03: ಸಮೀಪದ ಸತ್ತಿಗೇರಿ ಗ್ರಾಮದಲ್ಲಿ ಸೋಮವಾರ ರಾಮಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿತು. ಭಕ್ತರು ಜೈ ರಾಮಲಿಂಗೇಶ್ವರ ಎಂದು ಘೋಷಣೆ ಕೂಗುತ್ತಾ ಸಂಭ್ರಮದಿಂದ ರಥ ಎಳೆದರು. 

ವಾದ್ಯಮೇಳ ಹಾಗೂ ಸಂಗೀತ ಜಾತ್ರಾ ಮೆರವಣಿಗೆಗೆ ಮೆರಗು ತಂದಿತು. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ರಥೋತ್ಸವದ ಸಾನ್ನಿಧ್ಯ ವಹಿಸಿದ್ದರು. ಸುತ್ತಮುತ್ತಲಿನ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು, ದೇವರಿಗೆ ಹಣ್ಣುಕಾಯಿ ಅರ​‍್ಿಸಿದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. 

ಲೋಕಸಭಾ ಸದಸ್ಯ ಜಗದೀಶ ಶೆಟ್ಟರ ನೇತೃತ್ವ ವಹಿಸಿದ್ದರು. ಮಾಜಿ. ಜಿ. ಪಂ. ಸದಸ್ಯ ಅಜೀತಕುಮಾರ ದೇಸಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಬಿ. ಪಿ. ಗೋಡಿ, ಗೌಡಪ್ಪ ಸವದತ್ತಿ, ಮಡಿವಾಳಪ್ಪ ಬಿದರಗಡ್ಡಿ, ಗುರು ವಾಲಿ, ಸಂಜೀವಕುಮಾರ ನವಲಗುಂದ, ಈರಣ್ಣಾ ಹೊಸಮನಿ ಇದ್ದರು.