ಹೊರ ರಾಜ್ಯದ ಕ್ಷೌರಿಕರಿಗೆ ಅವಕಾಶ ಕೊಡದಿರಲು ಮನವಿ

ಚಿಕ್ಕೋಡಿ 19: ಹೊರ ರಾಜ್ಯದ ಕ್ಷೌರಿಕರಿಗೆ ಅವಕಾಶ ಮಾಡಿಕೊಡಬಾರದು. ಸ್ಥಳಿಯರಿಗೆ ಅವಕಾಶ ಕಲ್ಪಿಸಬೇಕೆಂದು ಗಡಿ ಭಾಗದ ಬೋರಗಾಂವ ಪಟ್ಟಣದ ಸಂತಸೇನಾ ಕ್ಷೌರಿಕರ ಸಂಘಟನೆ ಆಗ್ರಹಿಸಿ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

ಸಂಘದ ಅಧ್ಯಕ್ಷ ಅಪ್ಪಾಸಾಹೇಬ ಹಳಿಜೋಳೆ ಮಾತನಾಡಿ, ಪಟ್ಟಣದಲ್ಲಿ ಸುಮಾರು 18 ಸಲೂನ್ ಅಂಗಡಿಗಳಿವೆ.  ಕಳೆದ ಏಳು ದಶಕಗಳಿಂದ ನಾವು ನಮ್ಮ ಕುಟುಂಬವನ್ನು ಈ ವ್ಯವಸಾಯದಲ್ಲಿ ನಡೆಸುತ್ತಿದ್ದೇವೆ. ಈ ವ್ಯವಸಾಯದಿಂದ ಜೀವನ ಸಾಗಿಸುತ್ತಿರುವ ನಮಗೆ ಬೇರೆ ಜೀವನೋಪಾಯವಿಲ್ಲ.  ಸದ್ಯ ಈ ಜಾಗದಲ್ಲಿ ದಿಲ್ಲಿ ಸಲೂನ್‌ಗಳು ತಮ್ಮ ಅಂಗಡಿಗಳನ್ನು ತೆರೆಯುತ್ತಿದ್ದು, ಇದರಿಂದ ನಮಗೆ ಹಸಿವಿನಿಂದ ಬಳಲುವ ಪರಿಸ್ಥಿತಿ ಉಂಟಾಗುತ್ತದೆ. ದೆಹಲಿಯ ಸಲೂನ್ ಮಾಲೀಕರು ಅಂಗಡಿಗಳಲ್ಲಿ ಐದರಿಂದ ಆರು ಚೇರ್ ಸಲೂನ್ ಅಂಗಡಿಗಳನ್ನು ಸ್ಥಾಪಿಸುತ್ತಿರುವುದರಿಂದ ನಮ್ಮ ಮೇಲೆ ಅನ್ಯವಾಗುತ್ತಿದ್ದು, ಸ್ಥಳೀಯರು ನಮಗೆ ಸಹಕರಿಸಿ, ಬೇರೆ ರಾಜ್ಯದ ಸಲೂನ್ ಮಾಲೀಕರಿಗೆ ಈ ಸ್ಥಳದಲ್ಲಿ ಅವಕಾಶ ನೀಡದಂತೆ ವಿನಂತಿಸುತ್ತೇವೆ ಎಂದರು. 

ಸಂದೀಪ್ ಶಿಂಧೆ ಮಾತನಾಡಿ, ಪಟ್ಟಣದ ಎಲ್ಲ ಮುಖಂಡರು ಹಾಗೂ ನಾಗರಿಕರ ಸಹಕಾರದಿಂದ ಹಲವು ವರ್ಷಗಳಿಂದ ಈ ಸ್ಥಳದಲ್ಲಿ ಸಲೂನ್ ವ್ಯವಸಾಯ ಮಾಡುತ್ತಿದ್ದೇವೆ.  ಆದರೆ ಈಗ ಈ ಜಾಗಕ್ಕೆ  ಬೇರೆ ರಾಜ್ಯದ ಕ್ಷೌರಿಕರು ಬರುತ್ತಿರುವುದರಿಂದ್ ನಮಗೆ ಭಾರಿ ಹೊಡೆತ ಬೀಳಲಿದೆ.  ಆದರೆ ನೀವೆಲ್ಲರೂ ಸಹಕರಿಸಬೇಕು ಮತ್ತು ಅವರಿಗೆ ಈ ಸ್ಥಳದಲ್ಲಿ ಅವಕಾಶ ನೀಡಬಾರದು. 

ಈ ಬಗ್ಗೆ ನಾವು ಮುಖಂಡರಿಗೆ, ಪ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ ಹೇಳಿಕೆ ನೀಡಿದ್ದೇವೆ.  ನ್ಯಾಯ ಸಿಗುವವರೆಗೂ ಈ ಸ್ಥಳದಲ್ಲಿ ಅನಿರ್ದಿಷ್ಟಾವಧಿಗೆ ನಮ್ಮ ಕೆಲಸ ನಿಲ್ಲಿಸಿದ್ದೇವೆ ಎಂದರು. 

 ಅಣ್ಣಪ್ಪ ಹೊನಮಾನೆ, ಸುನೀಲ ಸಾಳುಂಖೆ, ವಿಠ್ಠಲ ಹಡಪದ, ರಾಮದಾಸ ಸಾಳುಂಖೆ, ಸಚಿನ ಹಳಿಜೋಳೆ, ಸುಭಾಷ ಹಳಿಜೋಳೆ, ಸೂರದಾಸ ಸಾಳುಂಖೆ, ಸಚಿನ ಕೋರೆ, ರಾಹುಲ ಕೋರೆ, ಪುರಂದರ ಸಾಳುಂಖೆ, ಸ್ವಪ್ನಿಲ ಹೊನಮಾನೆ, ವರದ ಕೋರೆ, ಸುರೇಶ ಹಳ್ಳಿಜೋಳೆ, ಸಂಜಯ ಹಳಿಜೋಳೆ, ಸದಾಶಿವ ಸಂಕಪಾಳ, ಪ್ರವೀಣ ಉಪಸ್ಥಿತರಿದ್ದರು.