ಶ್ರೀ ಕೆಂಪೇಗೌಡ ಸದ್ಭಾವನಾ ರಾಷ್ಟ್ರ ಪ್ರಶಸ್ತಿಗೆ ಖ್ಯಾತ ಚಿತ್ರ ಕಲಾವಿದ ಎಂ. ಡಿ. ರಫಿ ಆಯ್ಕೆ

Renowned film artist M. D. Rafi selected for the Shri Kempegowda Sadbhavana National Award

ಬಳ್ಳಾರಿ ಮಾರ್ಚ್‌ 15 :  ಸರ್ವೇ ಜನಾಃ ಆರ್ಟ್ಸ ಮತ್ತು ಕಲ್ಚರಲ್ (ಟ್ರಸ್ಟ್‌) ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿನಡೆಯುವ 8 ನೇ ಸಾಂಸ್ಕೃತಿಕ ಮಹೋತ್ಸವ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಚಿತ್ರಕಲಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗೆ " ಬೆಂಗಳೂರು ನಿರ್ಮಾತೃ ದಿ : ಶ್ರೀ ಕೆಂಪೇಗೌಡ ಸದ್ಭಾವನಾ ರಾಷ್ಟ್ರ ಪ್ರಶಸ್ತಿಗೆ ಬಳ್ಳಾರಿಯ ಮೊಟ್ಟೆಯಮೇಲೆ ರಾಮಾಯಣ ಖ್ಯಾತಿಯ  ಎ . ಮೊಹಮ್ಮದ್ ರಫಿ ಅವರು ಆಯ್ಕೆಆಗಿದ್ದಾರೆ .       

ಮಹಮ್ಮದ್ ರಫಿ ಅವರ ಕಲಾಕೃತಿಗಳುಜಲವರ್ಣ , ತೈಲವರ್ಣ, ಅಕ್ರಿಲಿಕ್,ಮಾದ್ಯಮ ಸೇರಿದಂತೆ ಇವರ ಹಲವಾರು ಕಲಾಕೃತಿಗಳು ದೇಶ ಮತ್ತು ವಿದೇಶಗಳಲ್ಲಿ ಪ್ರದರ್ಶನ ಕಂಡಿವೆ ಇವರ ಕಲಾಕೃತಿಗಳಲ್ಲಿ ಸರಳ ಮತ್ತು ನೈಜತೆಯನ್ನು ಒಳಗೊಂಡಂತೆ ನೆಟ್ಟಿಗರಿಗೆ ಇಷ್ಟವಾಗಿವೆ , ಇವರ ಪೋಸ್ಟರ್ ಕೃತಿಗೆ ಅಮೆರಿಕದ ನಾಸಾ ಪ್ರಥಮ ಪ್ರಶಸ್ತಿ ಸೇರಿದಂತೆ ಇತ್ತಿಚಿಗೆ ಆನ್ಲೈನ್ ಕೃತಿಗಳಿಗೆ ಮಹಾರಾಷ್ಟ್ರದಿಂದ ರೇಡಿಯಂಟ್ ಟ್ಯಾಲೆಂಟ್ ಬುಕ್ ಆಫ್ ರೆಕಾರ್ಡ್ಸ್‌,ಸೇರೆ​‍್ಡ ಆಗಿದೆ. ಅವರು  ಅದ್ಭುತ ಕನ್ನಡ ಪ್ರೇಮ, ರಫೀಯವರ ಹಿತಎನಿಸುವ ಕನ್ನಡ ಭಾಷೆಯ ಮತ್ತು ಅವರ ಸರಳತೆ ಅಹಂ ಇಲ್ಲದ ಅವರ ನಡೆ ಕಂಡು ಇಂದಿನ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಘೋಷಿಸಲಾಗಿದೆ. 

ಇದೇ ತಿಂಗಳ 24 ರಂದು ರವೀಂದ್ರ ಕಲಾಕ್ಷೇತ್ರ ದ ಆವರಣದಲ್ಲಿರುವ ನಯನ ಸಭಾಂಗಣದಲ್ಲಿನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದೆಂದು ಸಂಘಟಕರು ಮತ್ತು ಸಂಸ್ಥಾಪಕ ಅಧ್ಯಕ್ಷರು ತಿಳಿಸಿದ್ದಾರೆ.