ರಮೇಶ್.ಎಸ್.ಜಿ ಅವರಿಗೆ ಪಿ.ಎಚ್ಡಿ
ಬಳ್ಳಾರಿ 03: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಂಶೋಧನಾರ್ಥಿ ರಮೇಶ್ ಎಸ್.ಜಿ ಅವರಿಗೆ ಪಿ.ಎಚ್ಡಿ ಪದವಿ ಲಭಿಸಿದೆ.
ವಿವಿಯ ವ್ಯವಹಾರ ಅಧ್ಯಯನ ನಿಕಾಯದ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಪಕರಾದ ಡಾ.ರಾಘವೇಂದ್ರ ಎನ್.ಆರ್ ಅವರ ಮಾರ್ಗದರ್ಶನದಲ್ಲಿ “ಕಾರ್ೊರೇಟ್ ಗವರ್ನನ್ಸ್ ಪ್ರಾಕ್ಟಿಸಸ್ ಇನ್ ಇಂಡಿಯಾ : ಎಂಪಿರಿಕಲ್ ಇನ್ಸೈಟ್ಸ್ ಅಫ್ ಬಿಎಸ್ಇಲಿಸ್ಟೆಡ್ ಕಂಪನೀಸ್” ಎಂಬ ವಿಷಯದ ಮೇಲೆ ಮಹಾಪ್ರಬಂಧ ಮಂಡಿಸಿದ ಹಿನ್ನೆಲೆಯಲ್ಲಿ ಪಿ.ಎಚ್ಡಿ ಪದವಿ ನೀಡಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.