ಎನ್ಪಿಆರ್ ಕುರಿತು ಮೋದಿ ಸರ್ಕಾರದ ವಿರುದ್ಧ ರಾಹುಲ್, ಚಿದಂಬರಂ ವಾಗ್ದಾಳಿ: ಬಿಜೆಪಿ ತರಾಟೆ
ನವದೆಹಲಿ, ಡಿ 26, ರಾಷ್ಟ್ರೀಯ
ಜನಸಂಖ್ಯೆ ನೋಂದಣಿ ಕುರಿತಂತೆ ಮೋದಿ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್
ನಾಯಕರಾದ ರಾಹುಲ್ ಗಾಂಧಿ ಮತ್ತು ಪಿ ಚಿದಂಬರಂ ಅವರ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿರುವ ಬಿಜೆಪಿ,
ವಿದೇಶಗಳಲ್ಲಿ ಅಕ್ರಮ ವಲಸಿಗರನ್ನು ಹೇಗೆ ನಡೆಸಿಕೊಳ್ಳುತ್ತಾರೆಂಬುದನ್ನು ಸ್ವತ: ತಿಳಿಯಲು ರಾಹುಲ್
ಗಾಂಧಿ ಒಮ್ಮೆ ಅವಧಿ ಮೀರಿ ಯಾವುದಾದರೂ ದೇಶವೊಂದರಲ್ಲಿ ಉಳಿಯಲಿ ಎಂದು ಸವಾಲು ಹಾಕಿದೆ. ‘ರಾಹುಲ್ ಗಾಂಧಿ
ಅವರು ಆಗಾಗ್ಗೆ ವಿದೇಶಕ್ಕೆ ತೆರಳುತ್ತಾರೆ. ಒಮ್ಮೆ ಅವರು ವೀಸಾ ಅವಧಿ ಮುಗಿದು ಹೆಚ್ಚಿನ ಕಾಲ ಅಲ್ಲೇ
ಉಳಿಯಬೇಕು. ಗಡೀಪಾರು ಮಾಡುವ ಮುನ್ನ ಅಲ್ಲಿನ ಕೂಡಿಹಾಕುವ ಕೇಂದ್ರಕ್ಕೆ ತಳ್ಳಬೇಕು. ಆಗ ಅವರಿಗೆ ಬೇರೆ
ದೇಶಗಳಲ್ಲಿ ಅಕ್ರಮ ವಲಸಿಗರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ.’ ಎಂಬುದು ಅರ್ಥವಾಗುತ್ತದೆ ಎಂದು
ಬಿಜಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ತಿಳಿಸಿದ್ದಾರೆ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ
(ಎನ್ಪಿಆರ್) ಕುರಿತಂತೆ ಚಿದಂಬರಂ ನೀಡಿರುವ ಹೇಳಿಕೆಯನ್ನು ಮಾಳವೀಯ ಟೀಕಿಸಿದ್ದಾರೆ. 2012ರಲ್ಲಿ
ಚಿದಂಬರಂ ಪ್ರಸ್ತಾಪಿಸಿದ್ದ ಅಂಶಗಳಿರುವ ವಿಡೀಯೋವನ್ನು ಅವರು ಉಲ್ಲೇಖಿಸಿದ್ದಾರೆ. ‘ ದೇಶದ ನಿವಾಸಿಗಳಿಗೆ
ಕಾರ್ಡ್ ನೀಡುವುದು ಎನ್ ಪಿ ಆರ್ ಪ್ರಕ್ರಿಯೆಯ ಉದ್ದೇಶವಾಗಿದೆ. ಈ ಪ್ರಕ್ರಿಯೆಯು ಪೌರತ್ವ ಕಾರ್ಡ್
ಒದಗಿಸಲಿದೆ.’ ಎಂದು ಸ್ವತ: ಚಿದಂಬರಂ ಹೇಳಿದ್ದಾರೆ ಎಂದು ಮಾಳವೀಯ ಟೀಕಿಸಿದ್ದಾರೆ. ‘ವಾಸ್ತವವಾಗಿ ಪೌರತ್ವದಿಂದ ಎನ್ಪಿ ಆರ್ ಅನ್ನು ತೆಗೆದುಹಾಕಿದ್ದು ಎನ್ಡಿಎ ಸರ್ಕಾರ’ ಎಂದು ಮಾಳವೀಯ ಹೇಳಿದ್ದಾರೆ.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 