ಕಾಂಗ್ರೆಸ್ ಪಕ್ಷವು ದುಡಿಯುವ ವರ್ಗದ ಶಕ್ತಿ: ಶಾಸಕ ಮಹೇಂದ್ರ ತಮ್ಮಣ್ಣವರ
Congress party is the strength of the working class: MLA Mahendra Thammanavara
ಪಾಲಬಾವಿ 14 : ಕಾಂಗ್ರೆಸ್ ಪಕ್ಷವು ದುಡಿಯುವ ವರ್ಗದ ಶಕ್ತಿಯಾಗಿದೆ, ಜನಪರ ಕಾಳಜಿಯನ್ನು ಕಾಂಗ್ರೆಸ್ ಪಕ್ಷವು ಹೊಂದಿದೆ. ಸ್ತ್ರೀಯರಿಗೆ ಗ್ರಹಲಕ್ಷ್ಮಿ ಯೋಜನೆಯಿಂದ ತಿಂಗಳಿಗೆ ರೂ.2ಸಾವಿರ, ಸಂಚಾರಕ್ಕೆ ಬಸ್ ಫ್ರೀ, ಮನೆಗಳಿಗೆ ವಿದ್ಯುತ್ ಪ್ರೀ, ಹಸಿವು ತನಿಸಲು ಅನ್ನಭಾಗ್ಯ ಹೀಗೆ ಹಲವು ಜನಪರ ಯೋಜನೆಗಳನ್ನು ಮನೆ ಬಾಗಿಲಿಗೆ ತಂದಿರುವುದೇ ಕಾಂಗ್ರೆಸ್ ಪಕ್ಷವೆಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.ಅವರು ಹಂದಿಗುಂದ ಗ್ರಾಮದಲ್ಲಿ ಎಸ್.ಟಿ.ಪಿ/ಟಿಎಸ್ಪಿ ಯೋಜನೆ ಅಡಿಯಲ್ಲಿ 50 ಲಕ್ಷ ರೂಗಳ ವೆಚ್ಚದಲ್ಲಿ ಎಸ್ಸಿ ಕಾಲೋನಿಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ, ಹಾಯ್ ಮಾಸ್ಕ್ ದೀಪ ಪೂಜೆ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ಪರಗೌಡ ಪಾಟೀಲ, ಹನುಮಂತ ಗಸ್ತಿ, ಶಿವಪ್ಪ ಪಾಟೀಲ, ವರ್ಧಮಾನ ಶಿರಹಟ್ಟಿ, ಮುತ್ತಪ್ಪ ತಳವಾರ, ಕಾಂಗ್ರೆಸ್ ಪಕ್ಷದ ಕುಡಚಿ ಬ್ಲಾಕ್ ಅಧ್ಯಕ್ಷ ಪ್ರದೀಪ್ ಹಾಲ್ಗುಣಿ, ಸೋಮನಗೌಡ ಪಾಟೀಲ, ಯುವ ನಾಯಕ ಮಲಗೌಡ ಪಾಟೀಲ, ಲಕ್ಕಪ್ಪ ಹೊಸಾಲಿ, ಮಾಳಪ್ಪ ಹಾಡಕರ, ಅಶೋಕ ಗುಡ್ಡದಮಣಿ, ಆನಂದ ಪಾಟೀಲ, ಬಸವರಾಜ ಮೇತ್ರಿ, ಸಚಿನ್ ಹಳಕಲ್ಲ, ಗುತ್ತಿಗೆದಾರ ವಿನಾಯಕ ಗಾಡಿವಡ್ಡರ, ಹೆಚ್.ಎಂ.ಪಾಟೀಲ, ಶ್ರೀಮಂತ ಪೂಜಾರಿ, ಕಾಶಪ್ಪ ಹೊಸಾಲಿ, ಆನಂದ ಬನಾಜ, ಹನುಮಂತ ಘಂಟಿ, ಮಹಾದೇವ ಅಜ್ಜಪ್ಪಗೋಳ, ಮಹಾಲಿಂಗ ಮರನೂರ, ಸುರೇಶ ಕೂಟಗಿ, ಚಂದ್ರು ಕಂಬಾರ, ಮಾರುತಿ ಅಜ್ಜಪ್ಪಗೋಳ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 