ಗುಣಮಟ್ಟದ ಕಾಮಗಾರಿಯಾಗಲಿ: ಈಳಗೇರ
ಲೋಕದರ್ಶನ
ವರದಿ
ಯಲಬುರ್ಗಾ:
ತಾಲೂಕಿನ ಕೆರೆ ಅಭಿವೃದ್ಧಿ ಮಾಡಲು
ನಮ್ಮ ಶಾಸಕರಾದ ಹಾಲಪ್ಪ ಆಚಾರವರು ಸಾಕಷ್ಟು ಶ್ರಮವಹಿಸುತ್ತಿದ್ದಾರೆ ಅವರ ಕನಸನ್ನು ನನಸು
ಮಾಡಲು ನಾವೆಲ್ಲರೂ ಅವರ ಜೊತೆ ಕೈ
ಜೋಡಿಸಬೇಕು ಅಂದಾಗ ಕೆರೆಗಳ ಅಭಿವೃದ್ಧಿಯಾಗಿ ರೈತರಿಗೆ ಅನಕೂಲವಾಗಲಿದೆ ಎಂದು ತಾಪಂ ಸದಸ್ಯ
ಶರಣಪ್ಪ ಈಳಗೇರ ಹೇಳಿದರು.
2017-18
ನೇ ಸಾಲೀನ ನರೇಗಾ ಯೋಜನೆಯಡಿಯಲ್ಲಿ ತಾಲೂಕಿನ ಬಸಾಪೂರ ಕೆರೆ ಅಭಿವೃದ್ಧಿ ಕಾಮಗಾರಿಗೆ
ಚಾಲನೆ ನೀಡಿ ಅವರು ಮಾತನಾಡಿದರು.
ಈ ಕೆರೆ ಅಭಿವೃದ್ಧಿಗಾಗಿ
ರೂ,03 ಲಕ್ಷ ಹಣ ಬಿಡುಗಡೆಯಾಗಿದ್ದು
ಈ ಹಣ ಸದುಪಯೋಗವಾಗಬೇಕು ಉತ್ತಮ
ಹಾಗೂ ಗುಣಮಟ್ಟದ ಕಾಮಗಾರಿಯಾಗಬೇಕು ಕೆರೆಯಲ್ಲಿ ನೀರು ಸಂಗ್ರಹಿಸುವದರಿಂದ ಅಂತರ್ಜಲ
ಮಟ್ಟ ಹೆಚ್ಚಾಗಿ ಕೆರೆಯ ಸುತ್ತ ಮುತ್ತ ಇರುವ ರೈತರ ಬೋರ್ವೆಲ್ಗಳಲ್ಲಿ
ನೀರಿನ ಮಟ್ಟ ಹೆಚ್ಚಾಗಿ ಬರಗಾಲದಲ್ಲಿಯೂ
ಬೆಳೆ ಬೇಳೆಯಲು ಅನುಕೂಲವಾಗುವದು ಇದರಿಂದ ರೈತ ಸಂಕಷ್ಟದಿಂದ ಪಾರಾಗುತ್ತಾನೆ
ಆದ್ದರಿಂದ ಇಂತಹ ಯೋಜನೆಗಳನ್ನು ಸದುಪಯೋಗ
ಮಾಡಲು ಎಲ್ಲರ ಸಹಕಾರ ಮುಖ್ಯವಾದದು ಎಂದರು,
ಪಿಡಿಓ ರವಿಕುಮಾರ ಲಿಂಗಣ್ಣನವರು, ಗ್ರಾಪಂ ಸದಸ್ಯರಾದ, ಮಹಮ್ಮದ್ಸಾಬ ತಾಳಿಕೋಟಿ, ಶರಣಪ್ಪಗೌಡ ಪಾಟೀಲ, ಬಸವರಾಜ ಹೋಸಗೌಡರ, ಶೇಖಪ್ಪ ವಣಗೇರಿ, ಎನ್ಆರ್ಇಜಿ ಸಹಾಯಕ ಜಗದೀಶ ಸೇರಿದಂತೆ ಅನೇಕರು ಹಾಜರಿದ್ದರು.
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 