ಸ್ಕಾಲಾರ್‌ಶಿಫ್ ಟೆಸ್ಟ್‌ನಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

ಸ್ಕಾಲಾರ್‌ಶಿಫ್ ಟೆಸ್ಟ್‌ನಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ  Prize distribution to the winning students in the Scholarship Test

 ಬಳ್ಳಾರಿ 22 : 2025-26ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಯಾಟ್ರೀಯಾ ತಾಂತ್ರಿಕ ವಿಶ್ವವಿದ್ಯಾಲಯ ಬೆಂಗಳೂರು ಹಾಗೂ ಐಡಿಪಿಎಸ್ ಪದವಿ ಪೂರ್ವ ಕಾಲೇಜು, ಬಳ್ಳಾರಿ ಇವರ ಸಂಯುಕ್ತ ಆಶ್ರಯದಲ್ಲಿ ಏರಿ​‍್ಡಸಲಾಗಿದ್ದ 2026ರ ಯಾಟ್ರೀಯಾ ತಾಂತ್ರಿಕ ವಿಶ್ವವಿದ್ಯಾಲಯ ಸ್ಕಾಲಾರ್‌ಶಿಫ್ ಟೆಸ್ಟ್‌ನಲ್ಲಿ ನಮ್ಮ ಕಾಲೇಜಿನ 110 ವಿದ್ಯಾರ್ಥಿಗಳು ಭಾಗವಿಹಿಸಿ ಪ್ರವೇಶ ಪರೀಕ್ಷೆ ಬರೆದಿದ್ದು, ಅದರಲ್ಲಿ ಟಾಪ್ 3 ವಿದ್ಯಾರ್ಥಿಗಳಿಗೆ ಯಾಟ್ರೀಯಾ ತಾಂತ್ರಿಕ ವಿಶ್ವವಿದ್ಯಾಲಯ ಬೆಂಗಳೂರು ಎಜಿಎಂಗಳಾದ ಜಿ ಅನೀಲ್ ಕುಮಾರ್, ಎನ್ ಈಶ್ವರ್ ರೆಡ್ಡಿ ಮತ್ತು ಮೇಘನಾ ಶಾಸ್ತ್ರಿ ಇವರುಗಳು ವಿಜೇತಾರದ ವಿದ್ಯಾರ್ಥಿಗಳಿಗೆ ತಲಾ ಒಬ್ಬ ವಿದ್ಯಾರ್ಥಿಗೆ ರೂ: 30,000-00 ನಂತೆ   3 ವಿದ್ಯಾರ್ಥಿಗಳಿಗೆ ಬಹುಮಾನವನ್ನು ನಮ್ಮ ಕಾಲೇಜಿನ ಛೇರ್‌ಮಾನ್‌ಗಳಾದ ಇ ಜಯಚಂದ್ರ ರೆಡ್ಡಿ, ಪ್ರಾಂಶುಪಾಲರಾದ ತಿಪ್ಪಾರೆಡ್ಡಿಯವರು ಹಾಗೂ ಎಜಿಎಂಗಳಾದ ವೆಂಕಟಕೃಷ್ಣ ಇವರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿರುತ್ತಾರೆ ಎಂದು ತಿಳಿಸಲು ಹರ್ಷವಾಗುತ್ತದೆ. 

ವಿಜೇತರಾದ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತೆ ಇದೆ. 

1. ನವ್ಯಾಶ್ರೀ ಹಿ ವಿಜ್ಞಾನ ವಿಭಾಗ (ಪಿಸಿಎಂಸಿ)  

2. ಗಣೇಶ್ - ವಿಜ್ಞಾನ ವಿಭಾಗ (ಪಿಸಿಎಂಸಿ) 

3. ಹೆಚ್ ಪ್ರಣೀತಾ - ವಿಜ್ಞಾನ ವಿಭಾಗ (ಪಿಸಿಎಂಬಿ) 

ಸ್ಕಾಲಾರ್ ಶಿಫ್ ಟೆಸ್ಟ್‌ನಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿಯ ಛೇರ್‌ಮಾನ್‌ಗಳಾದ     ಇ ಜಯಚಂದ್ರ ರೆಡ್ಡಿಯವರು, ಪ್ರಾಂಶುಪಾಲರಾದ ತಿಪ್ಪಾರೆಡ್ಡಿಯವರು ಮತ್ತು ಎಜಿಎಂಗಳಾದ ವೆಂಕಟಕೃಷ್ಣ ಇವರುಗಳು ಅಭಿನಂದನೆಗಳನ್ನು ತಿಳಿಸಿರುತ್ತಾರೆ.