ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ
ಲೋಕದರ್ಶನ ವರದಿ
ಘಟಪ್ರಭಾ 09: ಗೋಕಾಕ ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಹಾಕಲಾಗಿದ್ದ ಬೆಂಗಳೂರು ಅರಮನೆ ವಿನ್ಯಾಸದ ಭವ್ಯವಾದ ವೇದಿಕೆಯ ಮೇಲೆ ಸತೀಶ ಜಾರಕಿಹೋಳಿ ಪೌಂಡೇಶನ್ ಇವರ ಆಶ್ರಯದಲ್ಲಿ ನಡೆದ ಸತೀಶ ಶುಗರ್ಸ ಅವಾಡ್ರ್ಸ 2019-20ನೇ ಸಾಲಿನ ತಾಲೂಕಾ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಭಾಷಣ ಸ್ಪರ್ದೇಯಲ್ಲಿ ರಾಜಾಪೂರ ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯ ಪ್ರವೀಣ ಮ. ಹೊಸೂರ "ಭಾರತ ದರ್ಶನ" ಎಂಬ ವಿಷಯದ ಕುರಿತು ಭಾಷಣ ಮಾಡಿ ದ್ವಿತೀಯ ಬಹುಮಾನ ಹಾಗೂ ಪ್ರೌಢ ಶಾಲಾ ವಿಭಾಗದ ಗಾಯನ ಸ್ಪರ್ಧೆಯಲ್ಲಿ ಘಟಪ್ರಭಾ ಕೆ.ಆರ್.ಎಚ್ ಪೌಢ ಶಾಲೆಯ ರುತಿಕಾ ಬಸವರಾಜ ಹೊಸೂರ ದ್ವಿತೀಯ ಬಹುಮಾನ ಪಡೆದು ಕ್ರಮವಾಗಿ 7000/- ಹಾಗೂ 13,000/- ರೂಪಾಯಿ ಬಹುಮಾನ ಹಾಗೂ ಆಕರ್ಷಕ ಟ್ರೋಪಿಯೊಂದಿಗೆ ಗೆಲುವಿನ ನಗೆ ಬೀರಿ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಮಾರ್ಗದರ್ಶಕರು, ಪಾಲಕರು, ಗ್ರಾಮಸ್ತರು ಮತ್ತು ಹಿರಿಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಮಕನಮರಡಿ ಶಾಸಕರಾದ ಸತೀಶ್ ಜಾರಕಿಹೋಳಿ ವಹಿಸಿಕೊಂಡಿದ್ದರು. ಸಾ. ಶಿ ಚಿಕ್ಕೋಡಿ ಇಲಾಖೆ ಉಪ ನಿರ್ಧೆಶಕರಾದ ಗಜಾನನ ಮನ್ನಿಕೇರಿ, ಮೂಡಲಗಿ ಬಿಇಒ ಎ.ಸಿ ಮನ್ನಿಕೇರಿ, ಗೋಕಾಕ ಬಿಇಒ ಜಿ.ಬಿ ಬಳಿಗಾರ, ಸೇರಿದಂತೆ ರಾಹುಲ ಸ. ಜಾರಕೀಹೋಳಿ ಹಾಗೂ ಕು. ಐಶ್ವರ್ಯಾ ಸ. ಜಾರಕಿಹೋಳಿ ಹಾಗೂ ಗಣ್ಯ ಮಾನ್ಯರು ಉಪಸ್ತಿತರಿದ್ದರು.
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ
ಬಡ ಅಂಗವಿಕಲ ಸರ್ಫರಾಜ್ ಬಿಸ್ತಿಗೆ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡದಿಂದ ಹೊಸ ವೀಲ್ಚೇರ್ ಉಡುಗೊರೆ 