ವೇಣುಗೋಪಾಲ ಜಿ.ಎಸ್ ಅವರಿಗೆ ಪಿಎಚ್‌ಡಿ ಪದವಿ

ಬಳ್ಳಾರಿ 16:ತುರುವೇಕೆರೆಯ ತಾಲ್ಲೂಕು ಎನ್‌ಆರ್‌ಎಲ್‌ಎಂ ವಿಭಾಗದಲ್ಲಿ ತಾಲ್ಲೂಕು ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ವೇಣುಗೋಪಾಲ ಜಿ.ಎಸ್ ಅವರಿಗೆ ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಪಿಹೆಚ್‌ಡಿ ಪದವಿ ನೀಡಿದೆ. 

ವಿವಿಯ ಸಮಾಜಕಾರ್ಯ ಅಧ್ಯಯನದ ವಿಭಾಗದ ಸಂಶೋಧನಾ ವಿದ್ಯಾರ್ಥಿ ವೇಣುಗೋಪಾಲ ಜಿ.ಎಸ್ ಅವರು ಸಮಾಜಕಾರ್ಯ ಅಧ್ಯಯನ ನಿಕಾಯದ ಸಮಾಜಕಾರ್ಯ ಅಧ್ಯಯನದ ವಿಭಾಗದ ಡಾ.ಕುಮಾರ ಸಹಾಯಕ ಪ್ರಾಧ್ಯಾಪಕ ಅವರ ಮಾರ್ಗದರ್ಶನದಲ್ಲಿ “ಎ ಸ್ಟಡಿ ಆನ್ ಇಂಪ್ಯಾಕ್ಟ್‌ ಆಫ್ ಲೇಬರ್ ವೆಲ್ಫೇರ್ ಫೆಸಿಲೀಟೀಸ್ ಆನ್ ವುಮೇನ್ ಎಂಪ್ಲಾಯಿಸ್ ಇನ್ ಗಾಮೆಂರ್ಟ್ ಇಂಡಸ್ಟ್ರೀಸ್ ಆಫ್ ತುಮಕೂರು ಅರ್ಬನ್‌” ಎಂಬ ವಿಷಯದ ಮೇಲೆ ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಲಾಗಿದೆ ಎಂದು ವಿವಿಯು ಪ್ರಕಟಣೆಯಲ್ಲಿ ತಿಳಿಸಿದೆ.