ಪಂಡಿತ ಭೋಸಲೆ ಜನ್ಮದಿನಾಚರಣೆ: ಗಾಲಿಖುರ್ಚಿ ವಿತರಣೆ
Pandit Bhosale Birthday Celebration: Distribution of Wheelchairs
ಚಿಮ್ಮಡ 13: ಜಗದಾಳ ಗ್ರಾಮದ ಕಾಂಗ್ರೆಸ್ ಮುಖಂಡರಾದ ಪಂಡಿತ ಭೋಸಲೆಯವರು ತಮ್ಮ ಜನ್ಮದಿನಾಚರಣೆ ನಿಮಿತ್ತ ಚಿಮ್ಮಡ, ಜಗದಾಳ, ಆಸಂಗಿ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟೀನೀಡಿ ಗಾಲಿಖುರ್ಚಿ ಹಾಗೂ ಬಡ ಬಾಣಂತಿಯರಿಗೆ ಆರೋಗ್ಯ ಕಿಟ್ ವಿತರಿಸಿದರು.
ಜನ್ಮದಿನಾಚರಣೆಯ ನಿಮಿತ್ತ ಮಂಗಳವಾರ ಮುಂಜಾನೆ ಸ್ಥಳಿಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ. ನಂತರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯವಿದ್ದ ಗಾಲಿಖುರ್ಚಿಯನ್ನು ವೈದ್ಯಾಧಿಕಾರಿ ಡಾ. ಅಶೋಕ ಪಡಸಾಲಿ, ಡಾ. ಕೆ,ಎಸ್, ತಳ್ಳಿಯವರಿಗೆ ಹಸ್ತಾಂತರಿಸಿದರು ನಂತರ ಗ್ರಾಮದ ಬಡ ಬಾನಂತಿಯರಿಗೆ ಆರೋಗ್ಯ ಕಿಟ್ ವಿತರಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.
ಗ್ರಾಮದ ಕಾಂಗ್ರೆಸ್ ಮುಖಂಡ ಮಹಾಲಿಂಗ ಮಾಯನ್ನವರ, ಸಲೀಮ ಸರಕಾವಸ, ಇಮಾಮ ಯಾದವಾಡರವರು ಪಂಡಿತ ಭೋಸಲೆಯವರನ್ನು ಸತ್ಕರಿಸುವ ಮೂಲಕ ಶುಭಾಶಯ ಕೋರಿದರು ಕೆಪಿಸಿಸಿ ಸದಸ್ಯ ಬಸವರಾಜ ಕೊಕಟನೂರ, ಅಡಿವೆಪ್ಪ ಪಾಟೀಲ,ಎಪಿಎಂಸಿ ಸದಸ್ಯ ಚಂದ್ರಶೇಖರ ಕುರಿ, ಜಗದಾಳ ಗ್ರಾ.ಪಂ. ಮಾಜಿ ಅಧ್ಯಕ್ಷ ಸುರೇಶ ಅಸ್ಕಿ, ರವಿಂದ್ರ ಗೊಬ್ಬಾಣಿ, ಸದಾಶಿವ ದಡ್ಡಿಮನಿ, ಕೆ.ಎಂ.ಎಫ್ ಅಧ್ಯಕ್ಷ ಶ್ರೀಶೈಲ ಪಾಟೀಲ, ಉಪಾಧ್ಯಕ್ಷ ದಾನಯ್ಯ ಮಠದ, ಕಾಶಪ್ಪ ಕಬಾಡಗಿ, ಮಹದೇವ ತೇರದಾಳ ಸೇರಿದಂತೆ ಹಲವಾರು ಜನ ಪ್ರಮುಖರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 