ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್

ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ  ಮುಖಂಡರು ಬರಿಗೈಯಿಂದ ವಾಪಸ್ MES high-level meeting with Maha CM cancelled: Jhapa leaders return empty-handed

ಬೆಳಗಾವಿ : ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಜೊತೆಗೆ ಸಭೆ ಮಾಡಲು ತೆರಳಿದ್ದ ಬೆಳಗಾವಿಯ ಝಾಪಾ ಮುಖಂಡರು ಉನ್ನತಾಧಿಕಾರ ಸಭೆ ರದ್ದಾದ ಹಿನ್ನೆಲೆಯಲ್ಲಿ ಮುಂಬಯಿಯಿಂದ ಬರಿಗೈಯಿಂದ ಬೆಳಗಾವಿಗೆ ವಾಪಸ್ಸಾಗಿದ್ದಾರೆಂದು ತಿಳಿದುಬಂದಿದೆ. ಮಹಾರಾಷ್ಟ್ರ ಸಿಎಂ ಅವರು ಬೆಳಗಾವಿ ಝಾಪಾ ಮುಖಂಡರಿಗೆ ಕೈಕೊಟ್ಟರಾ ಎನ್ನುವ ಕುರಿತು ಗುಸು ಗುಸು ಚರ್ಚೆ ಶುರುವಾಗಿದೆ. ಸಭೆ ರದ್ದಾದ ಹಿನ್ನೆಲೆಯಲ್ಲಿ ಝಾಪಾ ಮುಖಂಡರು ಅಸಮಾಧಾನಗೊಂಡಿದ್ದಾರೆ.

    ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಮುಂಬಯಿನ ಕಾರ್ಯಾಲಯದಲ್ಲಿ ಗಡಿ ವಿಷಯ ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚೆಯ ಕುರಿತು ಸಿಎಂ ಫಡ್ನವಿಸ್ ಅವರ ನೇತ್ರತ್ವದಲ್ಲಿ ಜೂನ್ 30ರಂದು ಸಭೆ ನಿಗದಿ ಮಾಡಲಾಗಿತ್ತು.ಆಡಳಿತಾತ್ಮಕ ನೆಪ ನೀಡಿ ರದ್ದು ಮಾಡಲಾಗಿದೆ.

    ಈ ಹಿನ್ನೆಲೆಯಲ್ಲಿ ಕೆಲ ಝಫಾ ಮುಖಂಡರು ಒಂದು ದಿನ ಮುಂಚಿತವಾಗಿ ಮುಂಬಯಿ ತಲುಪಿದ್ದರು. ಇನ್ನೂ ಕೆಲ ಮುಖಂಡರು ಅರ್ಧ ದಾರಿಯಲ್ಲಿ ಇದ್ದರು. ಮುಂಬಯಿನ ಸಭೆ ರದ್ದಾದ ಸುದ್ದಿ ತಿಳಿದ ಅರ್ಧ ದಾರಿಯ ಮುಖಂಡರು ಬಂದ ದಾರಿಗೆ ಸುಂಕವಿಲ್ಲ ಎಂಬ ನಾನುಡಿಯಂತೆ ವಾಪಸು ಬೆಳಗಾವಿಗೆ ಆಗಮಿಸಿದ್ದಾರೆಂದು ತಿಳಿದಿದೆ.