ಹಸಿದವರ ಹಸಿವನ್ನು ನೀಗಿಸಲು ನಮ್ಮ ಸಮಾಜ ಸದಾ ಸಿದ್ಧ
ಲೋಕದರ್ಶನ ವರದಿ
ಶಿರಹಟ್ಟಿ: ದಿನದಿನದಿಂದ ದಿನಕ್ಕೆ ಕೋರೋನ ಹಾವಳಿ ಉಲ್ಬಣಗೊಳ್ಳುತ್ತಿದ್ದು ಇದರಿಂದ ಲಾಕ್ಡೌನ್ ಆದ ಪರಿಣಾಮ ಪಟ್ಟಣದಲ್ಲಿ ನೂರಾರು ಜನ ಹಸಿವೆಯಿಂದ ಬಳಲುತ್ತಿದ್ದು ಅಂಥಹ ಜನರ ಹಸಿವೆಯನ್ನು ನೀಗುವುದಕ್ಕೋಸ್ಕರ ತಾಲೂಕಾ ಬಣಜಿಗ ಸಮಾಜವು ಸದಾ ತಯಾರಿದೆ ಎಂದು ಶಿರಹಟ್ಟಿ ತಾಲೂಕಾ ಬಣಜಿಗ ಸಮಾಜದ ಅಧ್ಯಕ್ಷ ಮುತ್ತಣ್ಣಮಜ್ಜಗಿ ಅಭಿಪ್ರಾಯ ಪಟ್ಟರು.
ಕೊರೊನಾ ಮಹಾಮಾರಿಯನ್ನು ನಿಯಂತ್ರಿಸುವ ಉದ್ದೇಶದಿಂದ ದೇಶದ ಜನತೆಯ ಹಿತದೃಷ್ಟಿಯಿಂದ ದೇಶಾದ್ಯಂತ ಜಾರಿಯಲ್ಲಿರುವ ಲಾಕ್ಡೌನ್ ಕಪ್ಯರ್ೂದಿಂದಾಗಿ ಪಟ್ಟಣದ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ನಿರ್ಗತಿಕರು, ಬಡವರಿಗೆ ಹಾಗೂ ಭಿಕ್ಷುಕರಿಗೆ ಒಂದು ತುತ್ತು ಅನ್ನಕ್ಕೂ ಪರದಾಡುವಂತಹದ್ದನ್ನು ಕಂಡು ನಮ್ಮ ಸಮಾಜದ ವತಿಯಿಂದ ಇಂದು ಆಹಾರ ಪದಾರ್ಥಗಳನ್ನು ವಿತರಿಸುವ ಕಾರ್ಯ ಮಾಡಿದೆವು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಸಣ್ಣ ಬೋರಶೆಟ್ಟರ, ಪ್ರಕಾಶ ಬೋರಶೆಟ್ಟರ, ಮುರುಗೇಶ ಆಲೂರ, ಶಿವಯೋಗಿ ಪಟ್ಟಣಶೆಟ್ಟಿ, ಮಂಜು ರಿತ್ತಿ, ಚಂದ್ರು ಕರ್ಜಗಿ, ಸಂತೋಷ ಬೋರಶೆಟ್ಟರ ಇನ್ನೂ ಅನೇಕರು ಉಪಸ್ಥಿರಿದ್ದರು.
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 