ರಾಷ್ಟ್ರಮಟ್ಟದ ಮ್ಯಾನೇಜ್ಮೆಂಟ್ ಫೆಸ್ಟ್ ಉತ್ಸವ
ಲೋಕದರ್ಶನ ವರದಿ
ಬೆಳಗಾವಿ 07: ನಗರದ ಮಿಲೇನಿಯಂ ಗಾರ್ಡನ್ನಲ್ಲಿ ಜೈನ್ ಕಾಲೇಜ್ ಆಫ್ ಬಿಬಿಎ, ಬಿಸಿಎ ಮತ್ತು ಕಾಮಸರ್್ ವತಿಯಿಂದ ಪರೌಸಿಯಾ-20 ಎಂಬ ರಾಷ್ಟ್ರಮಟ್ಟದ ಮ್ಯಾನೇಜ್ಮೆಂಟ್ ಫೆಸ್ಟ್ ನಡೆಯಿತು.
ಬುಧವಾರ ಮತ್ತು ಗುರುವಾರ ನಡೆದ ಉತ್ಸವವನ್ನು ಶುಫಿ ಸ್ಕೂಲ್ ಆ್ಯಪ್ನ ಸಿಇಓ ಸಿದ್ಧಾರ್ಥ ಜಂಬಗಿ ಉದ್ಘಾಟಿಸಿದರು. ಪ್ರೊ. ಕೆ.ಜಿ. ಮಲಾಲಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಸುನಿಲ್ ದೇಸಾಯಿ ಉಪಸ್ಥಿತರಿದ್ದರು.
ಚಿನ್ನಾರಿ ಮುತ್ತಾ ಖ್ಯಾತಿಯ ಚಿತ್ರನಟ ವಿಜಯ ರಾಘವೇಂದ್ರ ಅವರ ಹಾಡುಗಾರಿಕೆ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ತಂದಿತು.
ಮುಖ್ಯ ಅತಿಥಿಯಾಗಿ ಜಾವೇದ ಮುಷಾಪುರ, ವಿನಾಯಕ ಬಡಿಗೇರ, ವ್ಯವಸ್ಥಾಪಕ ಸದಸ್ಯರಾದ ಡಿ.ಟಿ. ದೇಸಾಯಿ, ರಾಧೆಶಾಮ್ ಹೆಡಾ, ಶ್ರದ್ಧಾ ಕೆ., ರಾಜ್ ಠಾಕೂರ್, ಪ್ರೊ. ಉದಯಚಂದ್ರ, ಪ್ರೊ. ಧಾರವಾಡ್ಕರ್, ಶೇಷ ಪಟ್ಟಂಕರ್, ಪ್ರೊ. ಸುನಿಲ್ ದೇಸಾಯಿ ಮತ್ತಿತರರು ಪಾಲ್ಗೊಂಡಿದ್ದರು.
ವಾಣಿಜ್ಯ ವಿಭಾಗದ ಪ್ರಮುಖ ಸ್ಪಧರ್ೆಯನ್ನು ಹುಬ್ಬಳ್ಳಿಯ ಆಕ್ಸಫಡರ್್ ಮಹಾವಿದ್ಯಾಲಯ ಗೆದ್ದುಕೊಂಡಿತು. ಎನ್ವೈಜಸ್ ಟ್ರೋಫಿಯನ್ನು ಬೆಂಗಳೂರಿನ ಕ್ರೈಸ್ಟ್ ಬಿಬಿಎ ಕಾಲೇಜು ತನ್ನದಾಗಿಸಿಕೊಂಡಿತು. ಟೆಕ್ಕಿಗಳಿಗಾಗಿ ಟೆಕ್ಕಿಗಳು ಸ್ಪಧರ್ೆಯಲ್ಲಿ ಗೋಗ್ಟೆ ಬಿಸಿಎ ಕಾಲೇಜು ವಿಜಯಿಯಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 